<p><strong>ಬಳ್ಳಾರಿ: </strong>`ನೀಲಮ್ಮ ಬೀಸಾಕತ್ತಾಳಂತ... ಅಂತೂ ಅಕಿ ದಯಾಲಿದ್ದ ಮಳಿ ಆಗಾಕತ್ತೈತಿ. ನಮ್ಮ ಬೆಳಿಗೂಳಿಗೆ ಆಸರಾಗೇತಿ. ಹಿಂಗ ಇನ್ನೊಂದ್ಯಾಡ್ ದಿನಾ ಮಳೀ ಹಿಡಕೋಂಡ್ ಬಿಟ್ರ, ಬ್ಯಾಸಿಗೀ ಬೆಳೀ ಕೈ ಸೇರತಾವು.~<br /> ತೀವ್ರ ಬರಗಾಲದಿಂದ ತತ್ತರಿಸಿ, ಮಳೆರಾಯನ ಹಾದಿ ಕಾಯುತ್ತಿದ್ದ ಜಿಲ್ಲೆಯ ಬೆಳಗಲ್ ಗ್ರಾಮದ ರೈತಮಹಿಳೆ ಕನಕಮ್ಮ, `ನೀಲಂ~ ಚಂಡಮಾರುತದಿಂದ ಸುರಿಯುತ್ತಿರುವ ಮಳೆಯ ಕುರಿತು ಗುರುವಾರ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.<br /> <br /> `ನೀಲಂ~ ಚಂಡಮಾರುತವನ್ನೇ `ನೀಲಮ್ಮ~ ಎಂದು ಸಂಬೋಧಿಸಿದ ಅವರು, ತಾವು ಬೆಳೆದ ಹಿಂಗಾರು ಬೆಳೆಗೆ ಈ ಹಸಿಮಳೆ ಆಸರೆಯಾಗಿದೆ ಎಂದರು.<br /> <br /> ಬಂಗಾಳ ಕೊಲ್ಲಿಯನ್ನು ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಬರದಿಂದ ಕಂಗೆಟ್ಟಿರುವ ರೈತಸಮೂಹ ನಿಟ್ಟಿಸಿರು ಬಿಡುವಂತಾಗಿದೆ.<br /> <br /> ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕೂಡ್ಲಿಗಿ, ಸಂಡೂರು, ಹೊಸಪೇಟೆ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಬುಧವಾರ ರಾತ್ರಿ ಆರಂಭವಾದ ಧೋ ಮಳೆ, ಗುರುವಾರ ಸಂಜೆಯವರೆಗೂ ಮುಂದುವರಿದ ಪರಿಣಾಮ ಜನಜೀವನ ಅಸ್ತವ್ಯವಸ್ತಗೊಂಡಿದೆ.<br /> <br /> ಗುರುವಾರ ಆಚರಿಸಬೇಕಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭಗಳಿಗೆ ಮಳೆ ಅಡ್ಡಿಪಡಿಸಿದರೂ, ಜನರಲ್ಲಿ ಬೇಸರ ಮೂಡದೆ, ಹರ್ಷಚಿತ್ತರಾಗುವಂತೆ ಮಾಡಿದೆ.<br /> <br /> <strong>ಹಿಂಗಾರು ಬೆಳೆಗೆ ಆಸರೆ</strong>: ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ತಾಲ್ಲೂಕುಗಳ ಮಳೆಯಾಶ್ರಿತ ಪ್ರದೇಶಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ, ಕುಸುಬಿ, ಜೋಳ, ಗುರೆಳ್ಳು, ಹುರುಳಿ ಬಿತ್ತನೆ ಮಾಡಿ, ಮಳೆಯ ಕೊರತೆಯಿಂದಾಗಿ ಬೆಳೆ ಒಣಗಿ ಹೋಗುತ್ತಿರುವುದನ್ನು ಕಂಡು ಕಂಗಾಲಾಗಿದ್ದ ರೈತರಿಗೆ ಇದೀಗ ಆರಂಭವಾಗಿರುವ ಮಳೆ ಕೊಂಚ ನೆಮ್ಮದಿ ಮೂಡಿಸಿದೆ.<br /> <br /> ಬಳ್ಳಾರಿ ತಾಲ್ಲೂಕಿನಲ್ಲಿ 80 ಮಿಮೀ ಮಳೆ ಸುರಿದಿದ್ದು, ಸಂಡೂರಿನಲ್ಲಿ 60 ಮಿಮೀ, ಕಂಪ್ಲಿಯಲ್ಲಿ 60 ಮಿಮೀ, ಹೊಸಪೇಟೆಯಲ್ಲಿ 65 ಮಿಮೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.<br /> <br /> `ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಅಪಾರ ಪ್ರಮಾಣದ ಬೆಳೆ ಒಣಗಿ ಹೋಗಿದೆ. ಆದರೂ, ಅಂಗೈಯಲ್ಲಿ ಜೀವ ಹಿಡಿದಿದ್ದ ಕೆಲವು ಬೆಳೆಗಳಿಗೆ, `ಪ್ರವಾಹದಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯೇ ಆಸರೆ~ ಎಂಬಂತೆ ವರದಾನವಾಗಿದೆ. ಅಲ್ಲದೆ, ತೀವ್ರ ಬರಗಾಲದಿಂದ ತತ್ತರಿಸಿರುವವರಿಗೆ ತುಸು ತಡವಾಗಿ ಸುರಿಯುತ್ತಿರುವ ಮಳೆ ನೆಮ್ಮದಿ ನೀಡಿದೆ. ಒಣಗುತ್ತ ಸಾಗಿದ್ದ ಬೆಳೆಗಳಿಗೆ ಆಮ್ಲಜನಕ ನೀಡಿದಂತಾಗಿದೆ~ ಎಂದು ಬೆಳಗಲ್ನ ರೈತ ಬಸವರೆಡ್ಡಿ `ಪ್ರಜಾವಾಣಿ~ ಎದುರು ಸಂತಸ ಹಂಚಿಕೊಂಡರು.<br /> <br /> <strong>ತುಂಬಿದ ಕೆರೆ:</strong> ಕೂಡಿಗಿ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಪಟ್ಟಣದ ಹೊರ ವಲಯದಲ್ಲಿರುವ ಅಮರದೇವರ ಗುಡ್ಡ ಗ್ರಾಮದ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ.<br /> <br /> ತಾಲ್ಲೂಕಿನ ವಿವಿಧೆಡೆ ತಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಕುಸಿದಿರುವ ಅಂತರ್ಜಲ ಮಟ್ಟದ ಸುಧಾರಣೆಗೆ ಅನುಕೂಲ ಕಲ್ಪಿಸಿದೆ.<br /> <br /> ತಡವಾಗಿ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಬೆಳೆದಿರುವ ಶೇಂಗಾ ಬೆಳೆಗೆ ಮಾರಕವಾಗಿ ಪರಿಣಮಿಸಿದೆ.<br /> <br /> <strong>ಸಜ್ಜೆ ಬೆಳೆ ನಾಶ: </strong>ಮಳೆಯಿಂದ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲವಾಗಿದ್ದರೂ, ಕಟಾವು ಮಾಡಿ, ರಸ್ತೆಯ ಮೇಲೆ ಹಾಕಲಾಗಿದ್ದ ಸಜ್ಜೆ ಬೆಳೆ ಮಳೆಗೆ ಆಹುತಿಯಾಗಿದೆ.<br /> <br /> ಕಣ ಮಾಡುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಅಪಾರ ಮೌಲ್ಯದ ಸಜ್ಜೆ ಹಾಗೀಡಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.<br /> <br /> ತೋಟಗಾರಿಕೆ ಬೆಳೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ತಾಲ್ಲೂಕಿನ ರೈತರಿಗೆ ಮಳೆ ಸಂತಸ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>`ನೀಲಮ್ಮ ಬೀಸಾಕತ್ತಾಳಂತ... ಅಂತೂ ಅಕಿ ದಯಾಲಿದ್ದ ಮಳಿ ಆಗಾಕತ್ತೈತಿ. ನಮ್ಮ ಬೆಳಿಗೂಳಿಗೆ ಆಸರಾಗೇತಿ. ಹಿಂಗ ಇನ್ನೊಂದ್ಯಾಡ್ ದಿನಾ ಮಳೀ ಹಿಡಕೋಂಡ್ ಬಿಟ್ರ, ಬ್ಯಾಸಿಗೀ ಬೆಳೀ ಕೈ ಸೇರತಾವು.~<br /> ತೀವ್ರ ಬರಗಾಲದಿಂದ ತತ್ತರಿಸಿ, ಮಳೆರಾಯನ ಹಾದಿ ಕಾಯುತ್ತಿದ್ದ ಜಿಲ್ಲೆಯ ಬೆಳಗಲ್ ಗ್ರಾಮದ ರೈತಮಹಿಳೆ ಕನಕಮ್ಮ, `ನೀಲಂ~ ಚಂಡಮಾರುತದಿಂದ ಸುರಿಯುತ್ತಿರುವ ಮಳೆಯ ಕುರಿತು ಗುರುವಾರ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.<br /> <br /> `ನೀಲಂ~ ಚಂಡಮಾರುತವನ್ನೇ `ನೀಲಮ್ಮ~ ಎಂದು ಸಂಬೋಧಿಸಿದ ಅವರು, ತಾವು ಬೆಳೆದ ಹಿಂಗಾರು ಬೆಳೆಗೆ ಈ ಹಸಿಮಳೆ ಆಸರೆಯಾಗಿದೆ ಎಂದರು.<br /> <br /> ಬಂಗಾಳ ಕೊಲ್ಲಿಯನ್ನು ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಬರದಿಂದ ಕಂಗೆಟ್ಟಿರುವ ರೈತಸಮೂಹ ನಿಟ್ಟಿಸಿರು ಬಿಡುವಂತಾಗಿದೆ.<br /> <br /> ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕೂಡ್ಲಿಗಿ, ಸಂಡೂರು, ಹೊಸಪೇಟೆ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಬುಧವಾರ ರಾತ್ರಿ ಆರಂಭವಾದ ಧೋ ಮಳೆ, ಗುರುವಾರ ಸಂಜೆಯವರೆಗೂ ಮುಂದುವರಿದ ಪರಿಣಾಮ ಜನಜೀವನ ಅಸ್ತವ್ಯವಸ್ತಗೊಂಡಿದೆ.<br /> <br /> ಗುರುವಾರ ಆಚರಿಸಬೇಕಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭಗಳಿಗೆ ಮಳೆ ಅಡ್ಡಿಪಡಿಸಿದರೂ, ಜನರಲ್ಲಿ ಬೇಸರ ಮೂಡದೆ, ಹರ್ಷಚಿತ್ತರಾಗುವಂತೆ ಮಾಡಿದೆ.<br /> <br /> <strong>ಹಿಂಗಾರು ಬೆಳೆಗೆ ಆಸರೆ</strong>: ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ತಾಲ್ಲೂಕುಗಳ ಮಳೆಯಾಶ್ರಿತ ಪ್ರದೇಶಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ, ಕುಸುಬಿ, ಜೋಳ, ಗುರೆಳ್ಳು, ಹುರುಳಿ ಬಿತ್ತನೆ ಮಾಡಿ, ಮಳೆಯ ಕೊರತೆಯಿಂದಾಗಿ ಬೆಳೆ ಒಣಗಿ ಹೋಗುತ್ತಿರುವುದನ್ನು ಕಂಡು ಕಂಗಾಲಾಗಿದ್ದ ರೈತರಿಗೆ ಇದೀಗ ಆರಂಭವಾಗಿರುವ ಮಳೆ ಕೊಂಚ ನೆಮ್ಮದಿ ಮೂಡಿಸಿದೆ.<br /> <br /> ಬಳ್ಳಾರಿ ತಾಲ್ಲೂಕಿನಲ್ಲಿ 80 ಮಿಮೀ ಮಳೆ ಸುರಿದಿದ್ದು, ಸಂಡೂರಿನಲ್ಲಿ 60 ಮಿಮೀ, ಕಂಪ್ಲಿಯಲ್ಲಿ 60 ಮಿಮೀ, ಹೊಸಪೇಟೆಯಲ್ಲಿ 65 ಮಿಮೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.<br /> <br /> `ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಅಪಾರ ಪ್ರಮಾಣದ ಬೆಳೆ ಒಣಗಿ ಹೋಗಿದೆ. ಆದರೂ, ಅಂಗೈಯಲ್ಲಿ ಜೀವ ಹಿಡಿದಿದ್ದ ಕೆಲವು ಬೆಳೆಗಳಿಗೆ, `ಪ್ರವಾಹದಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯೇ ಆಸರೆ~ ಎಂಬಂತೆ ವರದಾನವಾಗಿದೆ. ಅಲ್ಲದೆ, ತೀವ್ರ ಬರಗಾಲದಿಂದ ತತ್ತರಿಸಿರುವವರಿಗೆ ತುಸು ತಡವಾಗಿ ಸುರಿಯುತ್ತಿರುವ ಮಳೆ ನೆಮ್ಮದಿ ನೀಡಿದೆ. ಒಣಗುತ್ತ ಸಾಗಿದ್ದ ಬೆಳೆಗಳಿಗೆ ಆಮ್ಲಜನಕ ನೀಡಿದಂತಾಗಿದೆ~ ಎಂದು ಬೆಳಗಲ್ನ ರೈತ ಬಸವರೆಡ್ಡಿ `ಪ್ರಜಾವಾಣಿ~ ಎದುರು ಸಂತಸ ಹಂಚಿಕೊಂಡರು.<br /> <br /> <strong>ತುಂಬಿದ ಕೆರೆ:</strong> ಕೂಡಿಗಿ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಪಟ್ಟಣದ ಹೊರ ವಲಯದಲ್ಲಿರುವ ಅಮರದೇವರ ಗುಡ್ಡ ಗ್ರಾಮದ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ.<br /> <br /> ತಾಲ್ಲೂಕಿನ ವಿವಿಧೆಡೆ ತಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಕುಸಿದಿರುವ ಅಂತರ್ಜಲ ಮಟ್ಟದ ಸುಧಾರಣೆಗೆ ಅನುಕೂಲ ಕಲ್ಪಿಸಿದೆ.<br /> <br /> ತಡವಾಗಿ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಬೆಳೆದಿರುವ ಶೇಂಗಾ ಬೆಳೆಗೆ ಮಾರಕವಾಗಿ ಪರಿಣಮಿಸಿದೆ.<br /> <br /> <strong>ಸಜ್ಜೆ ಬೆಳೆ ನಾಶ: </strong>ಮಳೆಯಿಂದ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲವಾಗಿದ್ದರೂ, ಕಟಾವು ಮಾಡಿ, ರಸ್ತೆಯ ಮೇಲೆ ಹಾಕಲಾಗಿದ್ದ ಸಜ್ಜೆ ಬೆಳೆ ಮಳೆಗೆ ಆಹುತಿಯಾಗಿದೆ.<br /> <br /> ಕಣ ಮಾಡುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಅಪಾರ ಮೌಲ್ಯದ ಸಜ್ಜೆ ಹಾಗೀಡಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.<br /> <br /> ತೋಟಗಾರಿಕೆ ಬೆಳೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ತಾಲ್ಲೂಕಿನ ರೈತರಿಗೆ ಮಳೆ ಸಂತಸ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>