<p><strong>ಹೂವಿನಹಡಗಲಿ: </strong>ಪಟ್ಟಣದ ತೇರು ಹನುಮಪ್ಪ ಬಯಲು ಜಾಗದಲ್ಲಿ ಶುಕ್ರವಾರ ಜೆಸಿ ಹೂವಿನಹಡಗಲಿ ರಾಯಲ್ಸ್ನವರು ಪರಿಸರ ಉಳಿಸಲು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.<br /> <br /> ಬ್ಯಾನರ್ನಲ್ಲಿ ಸಹಿ ಸಂಗ್ರಹ ಮಾಡಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕ.ಸಾ.ಪ.ಅಧ್ಯಕ್ಷೆ ಕೌಸಲ್ಯಾ ದೇವೇಂದ್ರನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ಉಳಿಸದಿದ್ದರೆ ಬದುಕು ಉಳಿಯುವುದು ಕಷ್ಟ ಇದು ಎಲ್ಲರೂ ಅರಿತು ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.<br /> ಗಾಳಿ, ಬೆಳಕು, ನೀರು ಕಲುಷಿತ ವಾಗಿದ್ದು ಅವುಗಳನ್ನು ಶುದ್ಧವಾಗಿರಿಸಿ ಭವಿಷ್ಯತ್ತಿನ ಜನರಿಗೆ ಉಳಿಸಿ ಕೊಡಬೇಕಾಗಿದೆ ಎಂದರು.</p>.<p><br /> ಜೆಸಿ ಹೂವಿನಹಡಗಲಿ ರಾಯಲ್ಸ್ನ ಅಧ್ಯಕ್ಷ ಎಚ್.ಸ್ವಾಮಿ ಮಾತನಾಡಿ ಪರಿಸರ ನಾಶದಿಂದಾಗಿ ಭೂಮಿ ಮೇಲಿನ ತಾಪಮಾನ ಹೆಚ್ಚಾಗಿ ಅನಾಹುತಗಳಿಗೆ ನಾಂದಿಯಾಗುತ್ತಿದೆ ಎಂದರು.<br /> <br /> ಒಂದೊಂದು ಹನಿ ನೀರು ಕೂಡ ಮುಖ್ಯ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.<br /> ಡಾ.ಕೊಟ್ರಮ್ಮ, ಡಾ.ಲಕ್ಷ್ಮಣ್ನಾಯ್ಕ, ಹಿತೇಶ್, ಮಂಜುನಾಥಶೆಟ್ಟಿ, ಕೃಷ್ಣರೆಡ್ಡಿ, ಪತ್ರಕರ್ತರಾದ ನಿಂಗಪ್ಪ, ಚಂದ್ರಪ್ಪ ಹಾಗೂ ಜೆಸಿ ಬಳಗದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ: </strong>ಪಟ್ಟಣದ ತೇರು ಹನುಮಪ್ಪ ಬಯಲು ಜಾಗದಲ್ಲಿ ಶುಕ್ರವಾರ ಜೆಸಿ ಹೂವಿನಹಡಗಲಿ ರಾಯಲ್ಸ್ನವರು ಪರಿಸರ ಉಳಿಸಲು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.<br /> <br /> ಬ್ಯಾನರ್ನಲ್ಲಿ ಸಹಿ ಸಂಗ್ರಹ ಮಾಡಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕ.ಸಾ.ಪ.ಅಧ್ಯಕ್ಷೆ ಕೌಸಲ್ಯಾ ದೇವೇಂದ್ರನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ಉಳಿಸದಿದ್ದರೆ ಬದುಕು ಉಳಿಯುವುದು ಕಷ್ಟ ಇದು ಎಲ್ಲರೂ ಅರಿತು ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.<br /> ಗಾಳಿ, ಬೆಳಕು, ನೀರು ಕಲುಷಿತ ವಾಗಿದ್ದು ಅವುಗಳನ್ನು ಶುದ್ಧವಾಗಿರಿಸಿ ಭವಿಷ್ಯತ್ತಿನ ಜನರಿಗೆ ಉಳಿಸಿ ಕೊಡಬೇಕಾಗಿದೆ ಎಂದರು.</p>.<p><br /> ಜೆಸಿ ಹೂವಿನಹಡಗಲಿ ರಾಯಲ್ಸ್ನ ಅಧ್ಯಕ್ಷ ಎಚ್.ಸ್ವಾಮಿ ಮಾತನಾಡಿ ಪರಿಸರ ನಾಶದಿಂದಾಗಿ ಭೂಮಿ ಮೇಲಿನ ತಾಪಮಾನ ಹೆಚ್ಚಾಗಿ ಅನಾಹುತಗಳಿಗೆ ನಾಂದಿಯಾಗುತ್ತಿದೆ ಎಂದರು.<br /> <br /> ಒಂದೊಂದು ಹನಿ ನೀರು ಕೂಡ ಮುಖ್ಯ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.<br /> ಡಾ.ಕೊಟ್ರಮ್ಮ, ಡಾ.ಲಕ್ಷ್ಮಣ್ನಾಯ್ಕ, ಹಿತೇಶ್, ಮಂಜುನಾಥಶೆಟ್ಟಿ, ಕೃಷ್ಣರೆಡ್ಡಿ, ಪತ್ರಕರ್ತರಾದ ನಿಂಗಪ್ಪ, ಚಂದ್ರಪ್ಪ ಹಾಗೂ ಜೆಸಿ ಬಳಗದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>