<p><strong>ಡಣಾಪುರ-114 (ಮರಿಯಮ್ಮನ ಹಳ್ಳಿ): </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಪಂಗಡ ಪ್ರಾಯೋಜಿತ ಕಾರ್ಯಕ್ರಮ ದಡಿಯಲ್ಲಿ ಪಟ್ಟಣದ ಕೆ.ಲಕ್ಷ್ಮಣ ತಂಡದವರು ಶನಿವಾರ ಸಂಜೆ ಪ್ರದರ್ಶಿಸಿದ `ಬಬ್ರುವಾಹನ ಕಾಳಗ~ ಬಯಲಾಟ ನೋಡುಗರ ಮನಸೂರೆಗೊಂಡಿತು.<br /> <br /> ಗ್ರಾಮದ ಪುಟ್ಟರಾಜ ಗವಾಯಿಗಳ ರಂಗಮಂದಿರಲಲ್ಲಿ ತಂಡದ ಕೆ.ವೆಂಕಣ್ಣ ಅವರು ಬಬ್ರುವಾಹನನ ಹಾಗೂ ಭರಮಪ್ಪ ಅರ್ಜುನನ ಪಾತ್ರದಲ್ಲಿನ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು.<br /> <br /> ರಾಮಚಂದ್ರಪ್ಪ ಧರ್ಮರಾಯ ನಾಗಿ ಅಭಿನಯಿಸಿದರೆ, ಚಿತ್ರಾಂಗದೆ ಯಾಗಿ ಗೊಲ್ಲರಹಳ್ಳಿಯ ಎನ್.ಪವಿತ್ರ, ಕೃಷ್ಣನ ಪಾತ್ರಧಾರಿಯಾಗಿ ಯು. ನಾಗಪ್ಪ, ಎಂ.ಹನುಮಂತ ಋಷಿಕೇತು ನಾಗಿ, ಸಾರಥಿಯಾಗಿ ದೊಡ್ಡ ಜಡಿಯಪ್ಪ ಅವರ ಅಭಿನಯಿಸಿದರು.<br /> <br /> ಅಂಜಿನಪ್ಪ ಕ್ಯಾಷಿಯೋ ನುಡಿದರೆ, ಯರಿಸ್ವಾಮಿ ಹಾರ್ಮೋನಿಯಂ, ತಿಪ್ಪೇ ಸ್ವಾಮಿ ಮದ್ದಳೆ ನುಡಿಸಿದರು. ಕೆ.ಪಂಪಣ್ಣ ಭಾಗವತರಾಗಿ ಕಾರ್ಯ ನಿರ್ವಹಿಸಿದರೆ, ಹೇಮರೆಡ್ಡಿ, ಕೆ. ಸಂಗಪ್ಪ, ಎಂ.ಹನುಮಂತ, ಕೆ.ತಿಪ್ಪಣ್ಣ, ಈ.ಸಿದ್ದಪ್ಪ ಹಿಮ್ಮೇಳ ಸಂಗೀತ ನುಡಿಸಿದರು. ವಸ್ತ್ರವಿನ್ಯಾಸ ಹಾಲೇಶ್, ಬಿ.ರಾಘವೇಂದ್ರ ಧ್ವನಿ ಮತ್ತು ಬೆಳಕು ನಿರ್ವಹಿಸಿದರು.<br /> <br /> ಇದಕ್ಕೂ ಮುಂಚೆ ಎನ್.ಪವಿತ್ರ ಗೊಲ್ಲರಹಳ್ಳಿ ಅವರಿಂದ ರಂಗಗೀತೆ ಗಳ ಗಾಯನ ಜರುಗಿತು. ಡಿ.ಎಂ. ಎರಿಸ್ವಾಮಿ ಹಾರ್ಮೋನಿಯಂ ನುಡಿಸಿ ದರೆ, ತಿಪ್ಪೇಸ್ವಾಮಿ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡಣಾಪುರ-114 (ಮರಿಯಮ್ಮನ ಹಳ್ಳಿ): </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಪಂಗಡ ಪ್ರಾಯೋಜಿತ ಕಾರ್ಯಕ್ರಮ ದಡಿಯಲ್ಲಿ ಪಟ್ಟಣದ ಕೆ.ಲಕ್ಷ್ಮಣ ತಂಡದವರು ಶನಿವಾರ ಸಂಜೆ ಪ್ರದರ್ಶಿಸಿದ `ಬಬ್ರುವಾಹನ ಕಾಳಗ~ ಬಯಲಾಟ ನೋಡುಗರ ಮನಸೂರೆಗೊಂಡಿತು.<br /> <br /> ಗ್ರಾಮದ ಪುಟ್ಟರಾಜ ಗವಾಯಿಗಳ ರಂಗಮಂದಿರಲಲ್ಲಿ ತಂಡದ ಕೆ.ವೆಂಕಣ್ಣ ಅವರು ಬಬ್ರುವಾಹನನ ಹಾಗೂ ಭರಮಪ್ಪ ಅರ್ಜುನನ ಪಾತ್ರದಲ್ಲಿನ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು.<br /> <br /> ರಾಮಚಂದ್ರಪ್ಪ ಧರ್ಮರಾಯ ನಾಗಿ ಅಭಿನಯಿಸಿದರೆ, ಚಿತ್ರಾಂಗದೆ ಯಾಗಿ ಗೊಲ್ಲರಹಳ್ಳಿಯ ಎನ್.ಪವಿತ್ರ, ಕೃಷ್ಣನ ಪಾತ್ರಧಾರಿಯಾಗಿ ಯು. ನಾಗಪ್ಪ, ಎಂ.ಹನುಮಂತ ಋಷಿಕೇತು ನಾಗಿ, ಸಾರಥಿಯಾಗಿ ದೊಡ್ಡ ಜಡಿಯಪ್ಪ ಅವರ ಅಭಿನಯಿಸಿದರು.<br /> <br /> ಅಂಜಿನಪ್ಪ ಕ್ಯಾಷಿಯೋ ನುಡಿದರೆ, ಯರಿಸ್ವಾಮಿ ಹಾರ್ಮೋನಿಯಂ, ತಿಪ್ಪೇ ಸ್ವಾಮಿ ಮದ್ದಳೆ ನುಡಿಸಿದರು. ಕೆ.ಪಂಪಣ್ಣ ಭಾಗವತರಾಗಿ ಕಾರ್ಯ ನಿರ್ವಹಿಸಿದರೆ, ಹೇಮರೆಡ್ಡಿ, ಕೆ. ಸಂಗಪ್ಪ, ಎಂ.ಹನುಮಂತ, ಕೆ.ತಿಪ್ಪಣ್ಣ, ಈ.ಸಿದ್ದಪ್ಪ ಹಿಮ್ಮೇಳ ಸಂಗೀತ ನುಡಿಸಿದರು. ವಸ್ತ್ರವಿನ್ಯಾಸ ಹಾಲೇಶ್, ಬಿ.ರಾಘವೇಂದ್ರ ಧ್ವನಿ ಮತ್ತು ಬೆಳಕು ನಿರ್ವಹಿಸಿದರು.<br /> <br /> ಇದಕ್ಕೂ ಮುಂಚೆ ಎನ್.ಪವಿತ್ರ ಗೊಲ್ಲರಹಳ್ಳಿ ಅವರಿಂದ ರಂಗಗೀತೆ ಗಳ ಗಾಯನ ಜರುಗಿತು. ಡಿ.ಎಂ. ಎರಿಸ್ವಾಮಿ ಹಾರ್ಮೋನಿಯಂ ನುಡಿಸಿ ದರೆ, ತಿಪ್ಪೇಸ್ವಾಮಿ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>