<p><strong>ಕಂಪ್ಲಿ:</strong> ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣಗಳು ನೈಸರ್ಗಿಕ ಪ್ರಕ್ರಿಯೆ ಗಳಾಗಿದ್ದು, ಅವುಗಳನ್ನು ಭಾವನಾತ್ಮಕ ವಾಗಿ ನೋಡದೆ ವೈಜ್ಞಾನಿಕ ಮನೋ ಭಾವದಿಂದ ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಶೇಖರ್ ಹೊರಪೇಟೆ ತಿಳಿಸಿದರು.<br /> <br /> ಪತಂಜಲಿ ಯೋಗ ಸಮಿತಿ ಕಂಪ್ಲಿ ಘಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಹೊಸ ಮಠದಲ್ಲಿ ಮಹಿಳೆ ಮತ್ತು ವಿಜ್ಞಾನ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ಮಹಿಳೆ ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಇಡೀ ಕುಟುಂಬ ವನ್ನೇ ವೈಜ್ಞಾನಿಕ ತಳಹದಿ ಮೇಲೆ ಕಟ್ಟಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.<br /> <br /> ಆಯುಷ್ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ ಮಾತನಾಡಿ, ಮಕ್ಕಳಿಗೆ ಕುರುಕಲು ಆಹಾರ (ಜಂಕ್ ಫುಡ್) ನೀಡುವ ಬದಲು ಮನೆಯಲ್ಲಿ ತಾಯಂದಿರು ಪೌಷ್ಟಿಕ ಆಹಾರ ಸಿದ್ಧಪಡಿಸಿ ನೀಡುವುದು ಒಳ್ಳೆಯದು ಎಂದರು.<br /> <br /> ಎಸ್.ಜಿ. ಚಿತ್ರಗಾರ ಕೌಟುಂಬಿಕ ದೌರ್ಜನ್ಯ ಕುರಿತು ಮಾತನಾಡಿದರು.<br /> <br /> ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಕಾರ್ಯಾಗಾರ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿ ರಾಜ್ಯ ಮಹಿಳಾ ಪ್ರಭಾರಿ ಶಾಂತಾ ಕಾರ್ಯಾಗಾರ ಉದ್ಘಾಟಿಸಿದರು. ನಂತರ ಮಹಿಳೆ ಯರಿಗೆ ಯೋಗ ತರಬೇತಿ ನೀಡಲಾಯಿತು.<br /> <br /> ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ. ಕೊಟ್ರೇಶ್, ಬಳ್ಳಾರಿ ಬಸಪ್ಪ, ಕರವೇ ಕಂಪ್ಲಿ ವಿಧಾನಸಭಾಕ್ಷೇತ್ರ ಅಧ್ಯಕ್ಷ ಎ. ರವೀಂದ್ರ ಹಾಜರಿದ್ದರು.<br /> <br /> <strong>ಜಾಗೃತಿ ಕಾರ್ಯಕ್ರಮ</strong><br /> <strong>ಹೊಸಪೇಟೆ:</strong> ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಾಹಿನಿ ಸಂಸ್ಥೆ ತಾಲ್ಲೂಕಿನ 10 ಮುದ್ದಾಪುರ ದಲ್ಲಿ ಕೌಟುಂಬಿಕ ಮಹಿಳಾ ದೌರ್ಜನ್ಯ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಂಗಳವಾರ ನಡೆಯಿತು. <br /> <br /> ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ಯಮನೂರು ಕಾರ್ಯಕ್ರಮ ಉದ್ಘಾಟಿಸಿದರು.<br /> ತಾಪಂ ಸದಸ್ಯ ಗಂಗಮ್ಮ, ವಾಹಿನಿ ಸಂಸ್ಥೆಯ ಶಿವಕುಮಾರ, ಇಲಾಖೆ ಮೇಲ್ವಚಾರಕಿ ನಾಗವೇಣಿ ಸೇರಿದಂತೆ ಇತರರು ಹಾಜರಿದ್ದರು. ಮಹಿಳೆಯ ಇಂದಿನ ಹಾಗೂ ಹಿಂದಿನ ಸ್ಥಿತಿಗತಿ ಮುಂದೆ ಆಗಬೇಕಾದ ಕ್ರಮಗಳ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ:</strong> ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣಗಳು ನೈಸರ್ಗಿಕ ಪ್ರಕ್ರಿಯೆ ಗಳಾಗಿದ್ದು, ಅವುಗಳನ್ನು ಭಾವನಾತ್ಮಕ ವಾಗಿ ನೋಡದೆ ವೈಜ್ಞಾನಿಕ ಮನೋ ಭಾವದಿಂದ ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಶೇಖರ್ ಹೊರಪೇಟೆ ತಿಳಿಸಿದರು.<br /> <br /> ಪತಂಜಲಿ ಯೋಗ ಸಮಿತಿ ಕಂಪ್ಲಿ ಘಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಹೊಸ ಮಠದಲ್ಲಿ ಮಹಿಳೆ ಮತ್ತು ವಿಜ್ಞಾನ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ಮಹಿಳೆ ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಇಡೀ ಕುಟುಂಬ ವನ್ನೇ ವೈಜ್ಞಾನಿಕ ತಳಹದಿ ಮೇಲೆ ಕಟ್ಟಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.<br /> <br /> ಆಯುಷ್ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ ಮಾತನಾಡಿ, ಮಕ್ಕಳಿಗೆ ಕುರುಕಲು ಆಹಾರ (ಜಂಕ್ ಫುಡ್) ನೀಡುವ ಬದಲು ಮನೆಯಲ್ಲಿ ತಾಯಂದಿರು ಪೌಷ್ಟಿಕ ಆಹಾರ ಸಿದ್ಧಪಡಿಸಿ ನೀಡುವುದು ಒಳ್ಳೆಯದು ಎಂದರು.<br /> <br /> ಎಸ್.ಜಿ. ಚಿತ್ರಗಾರ ಕೌಟುಂಬಿಕ ದೌರ್ಜನ್ಯ ಕುರಿತು ಮಾತನಾಡಿದರು.<br /> <br /> ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಕಾರ್ಯಾಗಾರ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿ ರಾಜ್ಯ ಮಹಿಳಾ ಪ್ರಭಾರಿ ಶಾಂತಾ ಕಾರ್ಯಾಗಾರ ಉದ್ಘಾಟಿಸಿದರು. ನಂತರ ಮಹಿಳೆ ಯರಿಗೆ ಯೋಗ ತರಬೇತಿ ನೀಡಲಾಯಿತು.<br /> <br /> ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ. ಕೊಟ್ರೇಶ್, ಬಳ್ಳಾರಿ ಬಸಪ್ಪ, ಕರವೇ ಕಂಪ್ಲಿ ವಿಧಾನಸಭಾಕ್ಷೇತ್ರ ಅಧ್ಯಕ್ಷ ಎ. ರವೀಂದ್ರ ಹಾಜರಿದ್ದರು.<br /> <br /> <strong>ಜಾಗೃತಿ ಕಾರ್ಯಕ್ರಮ</strong><br /> <strong>ಹೊಸಪೇಟೆ:</strong> ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಾಹಿನಿ ಸಂಸ್ಥೆ ತಾಲ್ಲೂಕಿನ 10 ಮುದ್ದಾಪುರ ದಲ್ಲಿ ಕೌಟುಂಬಿಕ ಮಹಿಳಾ ದೌರ್ಜನ್ಯ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಂಗಳವಾರ ನಡೆಯಿತು. <br /> <br /> ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ಯಮನೂರು ಕಾರ್ಯಕ್ರಮ ಉದ್ಘಾಟಿಸಿದರು.<br /> ತಾಪಂ ಸದಸ್ಯ ಗಂಗಮ್ಮ, ವಾಹಿನಿ ಸಂಸ್ಥೆಯ ಶಿವಕುಮಾರ, ಇಲಾಖೆ ಮೇಲ್ವಚಾರಕಿ ನಾಗವೇಣಿ ಸೇರಿದಂತೆ ಇತರರು ಹಾಜರಿದ್ದರು. ಮಹಿಳೆಯ ಇಂದಿನ ಹಾಗೂ ಹಿಂದಿನ ಸ್ಥಿತಿಗತಿ ಮುಂದೆ ಆಗಬೇಕಾದ ಕ್ರಮಗಳ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>