<p><strong>ಆನೇಕಲ್: </strong>ತಾಲ್ಲೂಕಿನ ಬೊಮ್ಮಸಂದ್ರದ ಬಳಿ ಭಾನುವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವಾಹನ ಸವಾರನ ಪತ್ನಿಯ ಎರಡು ಕಾಲು ಮುರಿದಿದೆ.</p>.<p>ತಮಿಳುನಾಡಿನ ಪ್ರಕಾಶ್(35) ಮೃತರು. ಪ್ರಕಾಶ್ ಪತ್ನಿ ಮಹದೇವಿ ಅವರ ಎರಡೂ ಕಾಲು ಮುರಿದಿದ್ದು, ದಂಪತಿಯ ಪುಟ್ಟ ಮಗು ಅಕುಲ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. </p>.<p>ತಮಿಳುನಾಡು ಮೂಲದ ಪ್ರಕಾಶ್ ಗೋವಿಂದಶೆಟ್ಟಿ ಪಾಳ್ಯದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ರಾಯಕೋಟೆಯ ದೇವಾಲಯವೊಂದಕ್ಕೆ ತೆರಳಲು ಬೈಕ್ನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಪ್ರಕಾಶ್ ತೆರಳಿದ್ದರು.</p>.<p>ಬೊಮ್ಮಸಂದ್ರದ ಬಳಿಯ ರಾಯಲ್ ಎನ್ಫೀಲ್ಡ್ ಷೋ ರೂಂ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕೆಳಗುರುಳಿದ್ದಾರೆ. ಪ್ರಕಾಶ್ ಮತ್ತು ಮಹದೇವಿ ಅವರ ಮೇಲೆ ಲಾರಿ ಚಕ್ರ ಹರಿದು ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟರೆ, ಮಹದೇವಿ ಎರಡೂ ಕಾಲು ಮುರಿದಿವೆ.</p>.<p>ಗಾಯಗೊಂಡಿದ್ದ ಮಗು ಮತ್ತು ತಾಯಿ ಮಹದೇವಿಯನ್ನು ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ತಾಯಿಯ ರಕ್ತಸಿಕ್ತ ಕಾಲುಗಳನ್ನು ನೋಡಿ ಮಗು ಅಕುಲ್ ಭಯದಿಂದ ರೋದಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಬೊಮ್ಮಸಂದ್ರದ ಬಳಿ ಭಾನುವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವಾಹನ ಸವಾರನ ಪತ್ನಿಯ ಎರಡು ಕಾಲು ಮುರಿದಿದೆ.</p>.<p>ತಮಿಳುನಾಡಿನ ಪ್ರಕಾಶ್(35) ಮೃತರು. ಪ್ರಕಾಶ್ ಪತ್ನಿ ಮಹದೇವಿ ಅವರ ಎರಡೂ ಕಾಲು ಮುರಿದಿದ್ದು, ದಂಪತಿಯ ಪುಟ್ಟ ಮಗು ಅಕುಲ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. </p>.<p>ತಮಿಳುನಾಡು ಮೂಲದ ಪ್ರಕಾಶ್ ಗೋವಿಂದಶೆಟ್ಟಿ ಪಾಳ್ಯದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ರಾಯಕೋಟೆಯ ದೇವಾಲಯವೊಂದಕ್ಕೆ ತೆರಳಲು ಬೈಕ್ನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಪ್ರಕಾಶ್ ತೆರಳಿದ್ದರು.</p>.<p>ಬೊಮ್ಮಸಂದ್ರದ ಬಳಿಯ ರಾಯಲ್ ಎನ್ಫೀಲ್ಡ್ ಷೋ ರೂಂ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕೆಳಗುರುಳಿದ್ದಾರೆ. ಪ್ರಕಾಶ್ ಮತ್ತು ಮಹದೇವಿ ಅವರ ಮೇಲೆ ಲಾರಿ ಚಕ್ರ ಹರಿದು ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟರೆ, ಮಹದೇವಿ ಎರಡೂ ಕಾಲು ಮುರಿದಿವೆ.</p>.<p>ಗಾಯಗೊಂಡಿದ್ದ ಮಗು ಮತ್ತು ತಾಯಿ ಮಹದೇವಿಯನ್ನು ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ತಾಯಿಯ ರಕ್ತಸಿಕ್ತ ಕಾಲುಗಳನ್ನು ನೋಡಿ ಮಗು ಅಕುಲ್ ಭಯದಿಂದ ರೋದಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>