<p><strong>ದೊಡ್ಡಬಳ್ಳಾಪುರ: ‘</strong>ಹೆಚ್ಚು ಮಂದಿ ರೈತರ ಸಾಲಮನ್ನಾ ನಮ್ಮ ಸಂಘದಲ್ಲಿ ಆಗಿದೆ’ ಎಂದು ಸಂಘದ ಅಧ್ಯಕ್ಷ ಕೆ.ಬಿ. ಬಚ್ಚೇಗೌಡ ಹೇಳಿದರು.</p>.<p>ತಾಲ್ಲೂಕಿನ ಕೆಸ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 539 ಜನ ರೈತರ ₹ 2.35 ಕೋಟಿ ಬೆಳೆ ಸಾಲಮನ್ನಾ, 2018ರಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 277ಜನ ರೈತರ ₹ 1.35 ಕೋಟಿ ಬೆಳೆ ಸಾಲಮನ್ನಾ ಆಗಿದೆ ಎಂದರು.</p>.<p>ಸಂಘ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ರೈತರಿಗೆ ಬೆಳೆಸಾಲ, ನಿಶ್ಚಿತ ಠೇವಣಿ ಸಂಗ್ರಹಿಸಲಾಗಿದೆ. ಸಂಘ 2016-17ನೇ ಸಾಲಿಗೆ ₹22 ಲಕ್ಷ, 2017-18ನೇ ಸಾಲಿಗೆ ₹ 4.46 ಲಾಭ ಗಳಿಸಿದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ನೀಡಲು ಸಂಘ ರೈತರಿಗೆ ಸ್ಪಂದಿಸುತ್ತಿದೆ. ಸಂಘದ ವತಿಯಿಂದ ರೈತರಿಗೆ ಅಗತ್ಯ ಸೇವೆ ನೀಡಲು ಶ್ರಮಿಸಲಿದೆ ಎಂದು ಹೇಳಿದರು.</p>.<p>ಸಭೆಯಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ನಿರ್ದೇಶಕರಾದ ಎನ್. ಮುನಿಯಪ್ಪ, ಕೆ.ಬಿ. ಶಿವಾನಂದ, ಕೆ.ಆರ್. ಚನ್ನೇಗೌಡ, ಎಚ್.ಎಚ್. ರಾಮೂರ್ತಿ, ಎಚ್.ಎಂ. ಬಸವರಾಜು, ಎಚ್. ಹನುಮಂತರಾಯಪ್ಪ, ಕೆ.ಎಚ್. ಜಯಲಕ್ಷ್ಮಮ್ಮ, ಸುಶೀಲಮ್ಮ, ಜಿ.ಕೆಂಪಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: ‘</strong>ಹೆಚ್ಚು ಮಂದಿ ರೈತರ ಸಾಲಮನ್ನಾ ನಮ್ಮ ಸಂಘದಲ್ಲಿ ಆಗಿದೆ’ ಎಂದು ಸಂಘದ ಅಧ್ಯಕ್ಷ ಕೆ.ಬಿ. ಬಚ್ಚೇಗೌಡ ಹೇಳಿದರು.</p>.<p>ತಾಲ್ಲೂಕಿನ ಕೆಸ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 539 ಜನ ರೈತರ ₹ 2.35 ಕೋಟಿ ಬೆಳೆ ಸಾಲಮನ್ನಾ, 2018ರಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 277ಜನ ರೈತರ ₹ 1.35 ಕೋಟಿ ಬೆಳೆ ಸಾಲಮನ್ನಾ ಆಗಿದೆ ಎಂದರು.</p>.<p>ಸಂಘ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ರೈತರಿಗೆ ಬೆಳೆಸಾಲ, ನಿಶ್ಚಿತ ಠೇವಣಿ ಸಂಗ್ರಹಿಸಲಾಗಿದೆ. ಸಂಘ 2016-17ನೇ ಸಾಲಿಗೆ ₹22 ಲಕ್ಷ, 2017-18ನೇ ಸಾಲಿಗೆ ₹ 4.46 ಲಾಭ ಗಳಿಸಿದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ನೀಡಲು ಸಂಘ ರೈತರಿಗೆ ಸ್ಪಂದಿಸುತ್ತಿದೆ. ಸಂಘದ ವತಿಯಿಂದ ರೈತರಿಗೆ ಅಗತ್ಯ ಸೇವೆ ನೀಡಲು ಶ್ರಮಿಸಲಿದೆ ಎಂದು ಹೇಳಿದರು.</p>.<p>ಸಭೆಯಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ನಿರ್ದೇಶಕರಾದ ಎನ್. ಮುನಿಯಪ್ಪ, ಕೆ.ಬಿ. ಶಿವಾನಂದ, ಕೆ.ಆರ್. ಚನ್ನೇಗೌಡ, ಎಚ್.ಎಚ್. ರಾಮೂರ್ತಿ, ಎಚ್.ಎಂ. ಬಸವರಾಜು, ಎಚ್. ಹನುಮಂತರಾಯಪ್ಪ, ಕೆ.ಎಚ್. ಜಯಲಕ್ಷ್ಮಮ್ಮ, ಸುಶೀಲಮ್ಮ, ಜಿ.ಕೆಂಪಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>