<p><strong>ದೇವನಹಳ್ಳಿ:</strong> ನೇಪಾಳದ ರಾಜಧಾನಿ ಕಾಠ್ಮಂಡುವಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಎರಡನೇ ದಿನವೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಬಂದಿದ್ದು, ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.</p>.<p>ಗುರುವಾರ ಬೆಳಗ್ಗೆ 10:30ಕ್ಕೆ ಅವರ ವಿಮಾನ ಬೆಂಗಳೂರಿನಿಂದ ಕಾಠ್ಮಂಡುವಿಗೆ ಹೊರಟಿತ್ತು. ಆದರೆ ಸ್ಪಷ್ಟ ಕಾರಣ ನೀಡದೆ ವಿಮಾನ ಕಾಠ್ಮಂಡುವಿನಲ್ಲಿ ಇಳಿಯದೇ ವಾಪಸ್ ಬೆಂಗಳೂರಿಗೇ ಬಂದಿತು. ಶುಕ್ರವಾರ ಮತ್ತೆ ಅದೇ ವಿಮಾನ ಬೆಳಗ್ಗೆ ಕಾಠ್ಮಂಡುವಿಗೆ ಹೊರಟಿತು. ಆದರೆ ಈ ಬಾರಿಯೂ ಅದು ಕಾಠ್ಮಂಡುವಿನಲ್ಲಿ ಇಳಿಯಲು ಸಾಧ್ಯವಾಗದೆ, ಲಕ್ನೋ ನಗರಕ್ಕೆ ತಿರುಗಿಸಲಾಯಿತು. ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಪ್ರಯಾಣಿಕರನ್ನು ಹಲವು ಗಂಟೆಗಳ ಕಾಲ ವಿಮಾನದ ಒಳಗೇ ಕೂರಿಸಲಾಗಿತ್ತು. ಈ ವೇಳೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.</p>.<p><strong>ಪ್ರಯಾಣಿಕರ ಸಂಕಷ್ಟ: </strong>ಸುಸ್ತು ಮತ್ತು ಬೇಸರದಿಂದ ಕಂಗೆಟ್ಟ ಪ್ರಯಾಣಿಕರು ವಿಮಾನದ ಒಳಗೇ ಪ್ರತಿಭಟನೆ ನಡೆಸಿದರು. ನಂತರ, ಅವರನ್ನೆಲ್ಲಾ ಮತ್ತೆ ಬೆಂಗಳೂರಿಗೆ ಕರೆತರಲಾಯಿತು. ಬೆಂಗಳೂರಿಗೆ ಬಂದ ನಂತರವೂ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದ ಇಮಿಗ್ರೇಶನ್ ಪ್ರದೇಶದ ಬಳಿ ಧರಣಿ ನಡೆಸಿದರು.</p>.<p>‘ನಮ್ಮ ಸಮಯ ವ್ಯರ್ಥವಾಯಿತು. ನಾವು ತಿಂಗಳುಗಟ್ಟಲೆ ಯೋಜನೆ ಮಾಡಿ ನೇಪಾಳ ಪ್ರವಾಸಕ್ಕೆ ಹೊರಟಿದ್ದೆವು. ಈಗ ಪ್ರವಾಸವೇ ಹಾಳಾಯಿತು. ದುಡ್ಡೂ ವ್ಯರ್ಥವಾಯಿತು’ ಎಂದು ಪ್ರಯಾಣಿಕೊಬ್ಬರು ಕಣ್ಣೀರಿಟ್ಟದ್ದಾರೆ.</p>.<p>‘ಒಟ್ಟು 30 ಗಂಟೆಗಳಿಗೂ ಹೆಚ್ಚು ಕಾಲ ನಾವು ವಿಮಾನದ ಒಳಗೇ ಸಿಲುಕಿಕೊಂಡಿದ್ದೆವು. ವಿಮಾನ ಕಂಪನಿಯವರು ಸರಿಯಾಗಿ ಮಾತನಾಡಿಸಲಿಲ್ಲ’ ಎಂದು ಮತ್ತೊಬ್ಬ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿದುಕೊಂಡರು. ಆದರೂ ಪ್ರಯಾಣಿಕರು, ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ನೀಡಬೇಕು. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ನೇಪಾಳದ ರಾಜಧಾನಿ ಕಾಠ್ಮಂಡುವಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಎರಡನೇ ದಿನವೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಬಂದಿದ್ದು, ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.</p>.<p>ಗುರುವಾರ ಬೆಳಗ್ಗೆ 10:30ಕ್ಕೆ ಅವರ ವಿಮಾನ ಬೆಂಗಳೂರಿನಿಂದ ಕಾಠ್ಮಂಡುವಿಗೆ ಹೊರಟಿತ್ತು. ಆದರೆ ಸ್ಪಷ್ಟ ಕಾರಣ ನೀಡದೆ ವಿಮಾನ ಕಾಠ್ಮಂಡುವಿನಲ್ಲಿ ಇಳಿಯದೇ ವಾಪಸ್ ಬೆಂಗಳೂರಿಗೇ ಬಂದಿತು. ಶುಕ್ರವಾರ ಮತ್ತೆ ಅದೇ ವಿಮಾನ ಬೆಳಗ್ಗೆ ಕಾಠ್ಮಂಡುವಿಗೆ ಹೊರಟಿತು. ಆದರೆ ಈ ಬಾರಿಯೂ ಅದು ಕಾಠ್ಮಂಡುವಿನಲ್ಲಿ ಇಳಿಯಲು ಸಾಧ್ಯವಾಗದೆ, ಲಕ್ನೋ ನಗರಕ್ಕೆ ತಿರುಗಿಸಲಾಯಿತು. ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಪ್ರಯಾಣಿಕರನ್ನು ಹಲವು ಗಂಟೆಗಳ ಕಾಲ ವಿಮಾನದ ಒಳಗೇ ಕೂರಿಸಲಾಗಿತ್ತು. ಈ ವೇಳೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.</p>.<p><strong>ಪ್ರಯಾಣಿಕರ ಸಂಕಷ್ಟ: </strong>ಸುಸ್ತು ಮತ್ತು ಬೇಸರದಿಂದ ಕಂಗೆಟ್ಟ ಪ್ರಯಾಣಿಕರು ವಿಮಾನದ ಒಳಗೇ ಪ್ರತಿಭಟನೆ ನಡೆಸಿದರು. ನಂತರ, ಅವರನ್ನೆಲ್ಲಾ ಮತ್ತೆ ಬೆಂಗಳೂರಿಗೆ ಕರೆತರಲಾಯಿತು. ಬೆಂಗಳೂರಿಗೆ ಬಂದ ನಂತರವೂ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದ ಇಮಿಗ್ರೇಶನ್ ಪ್ರದೇಶದ ಬಳಿ ಧರಣಿ ನಡೆಸಿದರು.</p>.<p>‘ನಮ್ಮ ಸಮಯ ವ್ಯರ್ಥವಾಯಿತು. ನಾವು ತಿಂಗಳುಗಟ್ಟಲೆ ಯೋಜನೆ ಮಾಡಿ ನೇಪಾಳ ಪ್ರವಾಸಕ್ಕೆ ಹೊರಟಿದ್ದೆವು. ಈಗ ಪ್ರವಾಸವೇ ಹಾಳಾಯಿತು. ದುಡ್ಡೂ ವ್ಯರ್ಥವಾಯಿತು’ ಎಂದು ಪ್ರಯಾಣಿಕೊಬ್ಬರು ಕಣ್ಣೀರಿಟ್ಟದ್ದಾರೆ.</p>.<p>‘ಒಟ್ಟು 30 ಗಂಟೆಗಳಿಗೂ ಹೆಚ್ಚು ಕಾಲ ನಾವು ವಿಮಾನದ ಒಳಗೇ ಸಿಲುಕಿಕೊಂಡಿದ್ದೆವು. ವಿಮಾನ ಕಂಪನಿಯವರು ಸರಿಯಾಗಿ ಮಾತನಾಡಿಸಲಿಲ್ಲ’ ಎಂದು ಮತ್ತೊಬ್ಬ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿದುಕೊಂಡರು. ಆದರೂ ಪ್ರಯಾಣಿಕರು, ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ನೀಡಬೇಕು. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>