ಸ್ಪರ್ಧಾ ಸಾರಥಿ ತರಬೇತಿ ಕೇಂದ್ರದ ಸ್ಥಾಪಕ ಎನ್. ಶ್ರೀನಿವಾಸಮೂರ್ತಿ ಮಾತನಾಡಿ, ‘ಯುವಜನತೆ ಇಂದು ಪುಸ್ತಕ ಹಿಡಿದು ಕಲಿಯುತ್ತಿರುವ ಶಿಕ್ಷಣ ಇನ್ನೊಬ್ಬರು ಕೊಡುವ ಉದ್ಯೋಗಕ್ಕೆ ಮಾನದಂಡವಾಗಿದೆಯೇ ಹೊರತು, ಅದರಿಂದ ಸಮಾಜ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಾಗುತಿಲ್ಲ. ಇಂದಿನ ಶಿಕ್ಷಣ ಕೇವಲ ಮಾರುಕಟ್ಟೆಯ ಸರಕಷ್ಟೇ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.