ಹೊಸಕೋಟೆ: ಪ್ಯೂಚರ್ ಲೈಫ್ ಇಂಡಿಯಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಸಣ್ಣ ವ್ಯಾಪಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಸೊಸೈಟಿ ಮುಖ್ಯಸ್ಥ ಕೆ. ವಿಜಯ್ ಕುಮಾರ್ ತಿಳಿಸಿದರು.
ನಗರದ ಜೆ.ಸಿ. ಸರ್ಕಲ್ನಲ್ಲಿ ಸೊಸೈಟಿಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸೊಸೈಟಿಯು ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿದ್ದು ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ ಎಂದು ತಿಳಿಸಿದರು.
ಬಡವರು, ಶೋಷಿತರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಪ್ರಾರಂಭವಾಗಿರುವ ಸೊಸೈಟಿಯಲ್ಲಿ ಸದಸ್ಯರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗಾಗಲೇ, ಸಾವಿರಾರು ಜನರು ಇದರ ಸದುಪಯೋಗ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಪ್ರಮುಖರಾದ ಮುನಿರಾಜು, ಗೋವಿಂದಪ್ಪ, ಎಂ. ಬಸವರಾಜ್, ಸುಶೀಲ, ನಾಗರಾಜ್, ಟಿ. ಮುನಿರಾಜು, ರಾಮ್ಕುಮಾರ್, ಕೆ.ಪಿ. ಬಾಬು ಶಿವಕುಮಾರ್, ಶಿವಣ್ಣ ಇದ್ದರು.