<p><strong>ಆನೇಕಲ್: </strong>ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದ ವಿಶ್ವ ಆನೆ ದಿನದಂದು ‘ಮಾನವ ಮತ್ತು ಆನೆ ಸಹಬಾಳ್ವೆ’ ವಿಷಯಾಧಾರಿತ ಕಾರ್ಯಕ್ರಮ ಗುರುವಾರ ನಡೆಯಿತು.</p>.<p>ಪ್ರವಾಸಿಗರಿಗೆ ಆನೆಗಳ ಪರಿಚಯ, ಮಾವುತರು, ಕಾವಡಿಗಳು ಮತ್ತು ರಾತ್ರಿ ವೀಕ್ಷಕರು ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ವಿವರಿಸಲಾಯಿತು.</p>.<p>ಈಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಜಪಾನ್ಗೆ ಬನ್ನೇರುಘಟ್ಟದ ನಾಲ್ಕು ಆನೆ ಸ್ಥಳಾಂತರ ಮಾಡಿದ ಅನುಭವವನ್ನು ಸಿಬ್ಬಂದಿ ಹಂಚಿಕೊಂಡರು.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯ ನಿರ್ವಹಣಾಧಿಕಾರಿ ಎ.ವಿ.ಸೂರ್ಯಸೇನ್, ಮಾನವ ಮತ್ತು ಆನೆ ಸಂಘರ್ಷ ನಿರ್ವಹಣೆ, ಮಾವುತರ ಬಾಂಧವ್ಯ ವಿವರಿಸುವ ಸಲುವಾಗಿ ವಿಶ್ವ ಆನೆ ದಿನ ಆಯೋಜಿಸಲಾಗಿದೆ ಎಂದರು.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನ, ಅಂಚೆ ಇಲಾಖೆ, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ, ರೊಟ್ರಾಕ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಮಾವುತರಾದ ಮೋಟ ಮತ್ತು ಭಾಸ್ಕರ್ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದ ವಿಶ್ವ ಆನೆ ದಿನದಂದು ‘ಮಾನವ ಮತ್ತು ಆನೆ ಸಹಬಾಳ್ವೆ’ ವಿಷಯಾಧಾರಿತ ಕಾರ್ಯಕ್ರಮ ಗುರುವಾರ ನಡೆಯಿತು.</p>.<p>ಪ್ರವಾಸಿಗರಿಗೆ ಆನೆಗಳ ಪರಿಚಯ, ಮಾವುತರು, ಕಾವಡಿಗಳು ಮತ್ತು ರಾತ್ರಿ ವೀಕ್ಷಕರು ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ವಿವರಿಸಲಾಯಿತು.</p>.<p>ಈಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಜಪಾನ್ಗೆ ಬನ್ನೇರುಘಟ್ಟದ ನಾಲ್ಕು ಆನೆ ಸ್ಥಳಾಂತರ ಮಾಡಿದ ಅನುಭವವನ್ನು ಸಿಬ್ಬಂದಿ ಹಂಚಿಕೊಂಡರು.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯ ನಿರ್ವಹಣಾಧಿಕಾರಿ ಎ.ವಿ.ಸೂರ್ಯಸೇನ್, ಮಾನವ ಮತ್ತು ಆನೆ ಸಂಘರ್ಷ ನಿರ್ವಹಣೆ, ಮಾವುತರ ಬಾಂಧವ್ಯ ವಿವರಿಸುವ ಸಲುವಾಗಿ ವಿಶ್ವ ಆನೆ ದಿನ ಆಯೋಜಿಸಲಾಗಿದೆ ಎಂದರು.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನ, ಅಂಚೆ ಇಲಾಖೆ, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ, ರೊಟ್ರಾಕ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಮಾವುತರಾದ ಮೋಟ ಮತ್ತು ಭಾಸ್ಕರ್ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>