ದೇವನಹಳ್ಳಿ ಬಿಎಂಟಿಸಿ ಬಸ್ ಡಿಪೊ ಮ್ಯಾನೇಜರ್ ನರಸಿಂಹರೆಡ್ಡಿ ಮಾತನಾಡಿ, 'ಯಾವ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಮಾಹಿತಿ ಇಲ್ಲ. 450ಕ್ಕೂ ಹೆಚ್ಚಿನ ಸಿಬ್ಬಂದಿ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಿರುಕುಳ ಆರೋಪ ಸುಳ್ಳು. ಸಂಸ್ಥೆ ವತಿಯಿಂದ ಸಿಗುವ ಎಲ್ಲ ಪ್ರಯೋಜನ ಕುಟುಂಬಕ್ಕೆ ನೀಡಲಾಗುವುದು' ಎಂದರು.