ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಶಾಸಕರಿಂದ ಸ್ವಚ್ಛತಾ ಅಭಿಯಾನ

Last Updated 4 ಜನವರಿ 2020, 13:57 IST
ಅಕ್ಷರ ಗಾತ್ರ

ಹೊಸಕೋಟೆ: ನಗರದ ಪೊಲೀಸ್ ಠಾಣೆಯ ಸುತ್ತ ಹಾಗೂ ಆಕಾಶವಾಣಿ ಕೇಂದ್ರದ ಬಳಿ ಶನಿವಾರ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ನಗರಸಭೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ರಾಷ್ಠೀಯ ಹೆದ್ದಾರಿಯ ಅಕ್ಕಪಕ್ಕದ ಜಾಗಗಳಿಗೆ ಶಾಸಕರು ಭೇಟಿ ನೀಡಿದರು. ಸಾರ್ವಜನಿಕರಿಗೆ ಬಸ್ ನಿಲ್ದಾಣ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳ ಪರಿಶೀಲಿಸಿದರು.

ನಗರಸಭೆ ಆಯುಕ್ತ ನಿಸಾರ್ ಅಹಮದ್, ಸಬ್ ಇನ್‌ಸ್ಪೆಕ್ಟರ್‌ ರಾಜು, ಲ್ಯಾಂಕೋ ಟೋಲ್ ಸಂಸ್ಥೆಯ ಅಧಿಕಾರಿಗಳು ಜತೆಗಿದ್ದರು. ಶರತ್‌ ಇದೇವೇಳೆ ಕುಂದುಕೊರತೆಗಳನ್ನೂ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT