ಪ್ರತಿ ಎಕರೆಗೆ ₹25ಸಾವಿರ ಬೆಳೆ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಆಹಾರದ ವ್ಯವಸ್ಥೆ, ನರೇಗಾ ಕೂಲಿ ಹೆಚ್ಚಳ ಮಾಡಬೇಕು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಈ ಕೂಡಲೆ ಈಡೇರಿಸಬೇಕು. ತಾಲ್ಲೂಕಿನಲ್ಲಿರುವ ಬರದ ಕುರಿತು ಕೇಂದ್ರ ಸರ್ಕಾರದ ತಂಡವೂ ಬಂದು ಪರಿಶೀಲಿಸಿ ಮಾಹಿತಿಯನ್ನು ದಾಖಲಿಸಿದೆ. ಆದರೆ ವರದಿ ಆಧರಿಸಿ ಯಾವುದೇ ಪರಿಹಾರ ಕಾರ್ಯ ಈವರೆಗೂ ಕೈಗೊಳ್ಳದಿರುವುದು ಜನರು ಮತ್ತಷ್ಟು ಸಂಕಷ್ಟಕ್ಕೆ ಈಡಾಗುವಂತಾಗಿದೆ ಎಂದರು.