ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಬಿಜ್ಜವಾರ ಸುಬ್ರಮಣಿ ಮಾತನಾಡಿ, ಉಚಿತವಾಗಿ ಪಡೆದ ವಸ್ತುಗಳಲ್ಲಿ ಲೋಪವಿದ್ದಲ್ಲಿ, ಗ್ರಾಹಕರಿಗೆ ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ. ಆದರೆ, ಹಣ ಪಾವತಿಸಿ ಪಡೆದ ವಸ್ತುವಿನಲ್ಲಿ ಲೋಪವಿದ್ದಲ್ಲಿ ಅದನ್ನು ಪ್ರಶ್ನಿಸುವ ಮತ್ತು ನ್ಯಾಯಬದ್ಧ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗೆ ಇರುತ್ತದೆ. ಆದ್ದರಿಂದ ಯಾವುದೇ ಸ್ವರೂಪದ ಅಮಿಷದ ಪ್ರಕಟಣೆಗಳಿಗೆ ಮಾರು ಹೋಗಬಾರದು ಎಂದು ಎಚ್ಚರಿಸಿದರು.