ಮಾಚಗೊಂಡನಹಳ್ಳಿ ನಿವಾಸಿ ಮಂಜುನಾಥ್ ಅವರು ಆಸ್ಪತ್ರೆಗೆ ಪಾವತಿಸುವ ಸಲುವಾಗಿ ಬ್ಯಾಂಕಿನಿಂದ ಹಣ ಪಡೆದು ಕಾರಿನಲ್ಲಿ ಬಂದಿದ್ದರು. ಶಾಲೆಯ ಬಳಿ ಮಗಳನ್ನು ಕರೆದುಕೊಂಡು ಹೋಗಲು ಕಾರಿನಲ್ಲಿ ಕುಳಿತಿದ್ದರು. ಆಗ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಬಲವಂತವಾಗಿ ಕಾರಿನ ಬಾಗಿಲು ತೆಗೆದು ಮಂಜುನಾಥ ಅವರನ್ನು ಕಾರಿನ ಒಳಗೆ ತಳ್ಳಿ ಹಣದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.