ವಿಜಯಪುರ(ದೇವನಹಳ್ಳಿ) ಜನವಸತಿ ಪ್ರದೇಶ ಸೇರಿದಂತೆ ತೋಟಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅವುಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎಲ್ಲೆಂದರಲ್ಲೆ ಸಿಮೆಂಟ್ ಕಂಬಗಳಿದ್ದು, ಈ ಹಿಂದೆ ಮಳೆ ಬಿದ್ದಾಗ ಈ ಕಂಬಗಳಲ್ಲಿ ವಿದ್ಯುತ್ ಹರಿದು ಪ್ರಾಣಾಪಾಯ ಸಂಭವಿಸಿದೆ. ಹಾಗಾಗಿ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಸಿಮೆಂಟ್ ಕಂಬಗಳನ್ನು ಹಾಕಿ ಜನರನ್ನು ಭಯದಿಂದ ಹೊರತರಬೇಕೆಂದು ಮನವಿ ಮಾಡಿದ್ದಾರೆ.