ಪುರಸಭೆಯ ಆರೋಗ್ಯಾಧಿಕಾರಿ ಉದಯ್ ಕುಮಾರ್ ರಾವ್ ಮಾತನಾಡಿ, ‘ಅದು ಆಯುರ್ವೇದಿಕ್ ಕೇಂದ್ರ, ಸುಮಾರು ವರ್ಷಗಳಿಂದ ನಡೆಯುತ್ತಿದೆ. ಜನರನ್ನು ಹೆಚ್ಚು ಸೇರಿಸದಂತೆ ಕಾಂಪೌಂಡ್ ಒಳಗೆ ಮಾಡಿಕೊಳ್ಳುವಂತೆ ತಿಳಿಸಿದ್ದೇವೆ. ಜನರು ಹೆಚ್ಚು ಸೇರುತ್ತಿದ್ದರೆ, ಎಚ್ಚರಿಕೆ ನೀಡುತ್ತೇವೆ. ಯಾರಿಗೂ ಇದುವರೆಗೂ ತೊಂದರೆಯಾಗಿಲ್ಲ. ಆರೋಗ್ಯ ಇಲಾಖೆಯವರು ಗಮನಹರಿಸಬೇಕು’ ಎಂದರು.