<p><strong>ದೇವನಹಳ್ಳಿ</strong>: ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಳೆದೆರೆಡು ದಿನಗಳಿಂದ ಬಿದ್ದ ಭಾರಿ ಮಳೆಯ ಪರಿಣಾಮವಾಗಿ, ಚರಂಡಿಗಳಲ್ಲಿ ಹಾಕಲಾಗಿದ್ದ ಆಸ್ಪತ್ರೆ ತ್ಯಾಜ್ಯವೂ ರಸ್ತೆಯಲ್ಲಿ ಹರಿದಾಡಿದ್ದು ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದೆ.</p>.<p>ಆಸ್ಪತ್ರೆ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ, ಅವುಗಳನ್ನು ರಸ್ತೆಯ ಬದಿಯಲ್ಲಿ ಹಾಗೂ ರಾಜಕಾಲುವೆ ತುಂಬಿದ್ದು, ಮಳೆ ನೀರು ಹರಿದ ಪರಿಣಾಮ ಸಿರಿಂಜ್ ಸೇರಿದಂತೆ ಮಾತ್ರೆಗಳು ಜನರು ವಾಸಿಸುವ ಪ್ರದೇಶದೆಡೆಗೆ ನುಗ್ಗಿದೆ.</p>.<p>ಈ ತ್ಯಾಜ್ಯಗಳಿಂದ ಸ್ಥಳೀಯರ ಆರೋಗ್ಯಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದು, ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು, ಔಷಧಿ ಮಳಿಗೆಗಳಲ್ಲಿ ಸೂಕ್ತವಾಗಿ ತಾಜ್ಯ ವಿಲೇವಾರಿ ಆಗದೇ ಇರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.</p>.<p>ಘಟನೆಯಿಂದ ಎಚ್ಚೆತ್ತ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದೆರೆಡು ಔಷಧಿ ಮಳಿಗೆಗಳಿಗೆ ನೋಟಿಜ್ ಜಾರಿ ಮಾಡಿದ್ದಾರೆ.</p>.<p>ರಸ್ತೆಯಲ್ಲಿ ಮಳೆ ನೀರಿನೊಂದಿಗೆ ಬಂದಿರುವ ಆಸ್ಪತ್ರೆ ತಾಜ್ಯವೂ ಪ್ರಾಣಿಗಳಿಗೆ ನೀಡುವ ಔಷಧಿಗಳು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಳೆದೆರೆಡು ದಿನಗಳಿಂದ ಬಿದ್ದ ಭಾರಿ ಮಳೆಯ ಪರಿಣಾಮವಾಗಿ, ಚರಂಡಿಗಳಲ್ಲಿ ಹಾಕಲಾಗಿದ್ದ ಆಸ್ಪತ್ರೆ ತ್ಯಾಜ್ಯವೂ ರಸ್ತೆಯಲ್ಲಿ ಹರಿದಾಡಿದ್ದು ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದೆ.</p>.<p>ಆಸ್ಪತ್ರೆ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ, ಅವುಗಳನ್ನು ರಸ್ತೆಯ ಬದಿಯಲ್ಲಿ ಹಾಗೂ ರಾಜಕಾಲುವೆ ತುಂಬಿದ್ದು, ಮಳೆ ನೀರು ಹರಿದ ಪರಿಣಾಮ ಸಿರಿಂಜ್ ಸೇರಿದಂತೆ ಮಾತ್ರೆಗಳು ಜನರು ವಾಸಿಸುವ ಪ್ರದೇಶದೆಡೆಗೆ ನುಗ್ಗಿದೆ.</p>.<p>ಈ ತ್ಯಾಜ್ಯಗಳಿಂದ ಸ್ಥಳೀಯರ ಆರೋಗ್ಯಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದು, ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು, ಔಷಧಿ ಮಳಿಗೆಗಳಲ್ಲಿ ಸೂಕ್ತವಾಗಿ ತಾಜ್ಯ ವಿಲೇವಾರಿ ಆಗದೇ ಇರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.</p>.<p>ಘಟನೆಯಿಂದ ಎಚ್ಚೆತ್ತ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದೆರೆಡು ಔಷಧಿ ಮಳಿಗೆಗಳಿಗೆ ನೋಟಿಜ್ ಜಾರಿ ಮಾಡಿದ್ದಾರೆ.</p>.<p>ರಸ್ತೆಯಲ್ಲಿ ಮಳೆ ನೀರಿನೊಂದಿಗೆ ಬಂದಿರುವ ಆಸ್ಪತ್ರೆ ತಾಜ್ಯವೂ ಪ್ರಾಣಿಗಳಿಗೆ ನೀಡುವ ಔಷಧಿಗಳು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>