ಇ–ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಾರ್ವಜನಿಕರು ನೀಡುವ ವಿವಿಧ ಕಂದಾಯ ದಾಖಲಾತಿ ಅರ್ಜಿಗಳನ್ನು ಇ–ಕೇಂದ್ರದಲ್ಲಿ ಸ್ಕ್ಯಾನ್ ಮಾಡಿದ ನಂತರ ಸಂದೇಶ ರವಾನೆಯಾಗಿ ಅರ್ಜಿದಾರರಿಗೆ ಒಂದು ಕೋಡ್ ಸಂಖ್ಯೆ ಬರಲಿದೆ. ನಂತರ ಯಾವ ಶಾಖೆಗೆ ಅರ್ಜಿಗಳು ತಲುಪಬೇಕು ಎಂದು ಇ–ಕೇಂದ್ರದಲ್ಲಿನ ತಂತ್ರಾಂಶ ಲಾಗಿನ್ ಮೂಲಕ ಆಯಾ ಶಾಖೆಯ ಸಂಬಂಧಿಸಿದ ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸುವ ಕಂಪ್ಯೂಟರ್ಗೆ ರವಾನಿಸುತ್ತದೆ. ಅಲ್ಲಿನ ಅಧಿಕಾರಿ ಅರ್ಜಿಯ ಸಂಪೂರ್ಣ ಮಾಹಿತಿ ಪರಿಶೀಲಿಸಿ ಸಂಬಂಧಿಸಿದ ಶಿರಸ್ತೆದಾರ್ಗೆ ರವಾನಿಸಬೇಕು. ನಂತರ ತಹಶೀಲ್ದಾರ್ ಅಂತಿಮವಾಗಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅರ್ಜಿದಾರರಿಗೆ ನೀಡಬೇಕು. ಮೊದಲ ಬಾರಿಗೆ ಜಿಲ್ಲೆಯ ನೆಲಮಂಗಲ ತಾಲ್ಲೂಕು ನಂತರ ದೇವನಹಳ್ಳಿ ತಾಲ್ಲೂಕಿನಲ್ಲಿ ಆರಂಭಿಸಲಾಗಿದೆ’ ಎಂದು ಹೇಳಿದರು.