<p><strong>ಹೊಸಕೋಟೆ:</strong> ಹೊಸಕೋಟೆ ತಾಲ್ಲೂಕಿನಲ್ಲಿ ಶೇ 68.57ರಷ್ಟು ಇ–ಖಾತೆ ವಿತರಣೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. </p>.<p>ನಗರದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಇ–ಖಾತಾ ಆಂದೋಲನ’ದಲ್ಲಿ ಮಾತನಾಡಿದರು.</p>.<p>ಬಿ–ಖಾತಾ ಆಂದೋಲನದ ಮೂಲಕ ಕಾವೇರಿ ತಂತ್ರಾಂಶದಲ್ಲಿ ಯಾರು ಇ–ಖಾತಾ ನೋಂದಣಿ ಮಾಡಿಕೊಳ್ಳುತ್ತಾರೋ ಅವರೆಲ್ಲರ ಆಸ್ತಿಗಳು ನಮೂದಾಗಿ ಹೆಚ್ಚು ಪಾರದರ್ಶಕವಾಗಲಿದ್ದು, ಮುಂದಿನ ವ್ಯವಹಾರಗಳಿಗೆ ಸುಲಭವಾಗಲಿದೆ ಎಂದರು.</p>.<p>ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 1850 ಆಸ್ತಿಗಳಿವೆ. 12537 ಆಸ್ತಿ ಎ ಖಾತೆಯಾಗಿವೆ. 5965 ಆಸ್ತಿಗಳಿಗೆ ಬಿ–ಖಾತೆಗಳಿವೆ ಎಂದರು.<br /><br />ಕೈಬರಹದಲ್ಲಿ ಖಾತೆ ಬರೆಯುತ್ತಿದ್ದಾಗ ಹಲವು ತಪ್ಪುಗಳಾಗುತ್ತಿದ್ದವು. ಕೆಲವರಿಗೆ ಮೋಸವಾಗುತ್ತಿತ್ತು. ಇದೆಲ್ಲದರ ನಡುವೆ ಜನರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. 2016ರಲ್ಲಿ ಇ–ಖಾತೆ ಪರಿಚಯ ಮಾಡಲಾಯಿತು. ಇದರಿಂದ ಜನರು ಖಾತೆಗಳಿಗಾಗಿ ಕಚೇರಿಗಳನ್ನು ಅಲೆದಾಡುವುದು ತಪ್ಪಿತು ಎಂದು ನಗರಸಭೆಯ ಪೌರಾಯುಕ್ತ ನೀಲಾಲೋಚನ ಪ್ರಭು ಹೇಳಿದರು.<br /><br />ಉದ್ಯಮಿಗಳಾದ ಬಿ.ವಿ.ಬೈರೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ಮಾಜಿ ನಿರ್ದೇಶಕ ಎಚ್.ಎಂ.ಸುಬ್ಬರಾಜು, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ನಾಮನಿರ್ದೇಶಿತ ಸದಸ್ಯ ಎನ್.ನಾಗರಾಜ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ಕುಮಾರ್, ಜಯರಾಜ್, ನಗರಸಭಾ ಸದಸ್ಯ ಗೌತಮ್, ನಾಗರಾಜ್, ಅಮ್ಜದ್, ರಮಾದೇವಿ, ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ಹೊಸಕೋಟೆ ತಾಲ್ಲೂಕಿನಲ್ಲಿ ಶೇ 68.57ರಷ್ಟು ಇ–ಖಾತೆ ವಿತರಣೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. </p>.<p>ನಗರದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಇ–ಖಾತಾ ಆಂದೋಲನ’ದಲ್ಲಿ ಮಾತನಾಡಿದರು.</p>.<p>ಬಿ–ಖಾತಾ ಆಂದೋಲನದ ಮೂಲಕ ಕಾವೇರಿ ತಂತ್ರಾಂಶದಲ್ಲಿ ಯಾರು ಇ–ಖಾತಾ ನೋಂದಣಿ ಮಾಡಿಕೊಳ್ಳುತ್ತಾರೋ ಅವರೆಲ್ಲರ ಆಸ್ತಿಗಳು ನಮೂದಾಗಿ ಹೆಚ್ಚು ಪಾರದರ್ಶಕವಾಗಲಿದ್ದು, ಮುಂದಿನ ವ್ಯವಹಾರಗಳಿಗೆ ಸುಲಭವಾಗಲಿದೆ ಎಂದರು.</p>.<p>ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 1850 ಆಸ್ತಿಗಳಿವೆ. 12537 ಆಸ್ತಿ ಎ ಖಾತೆಯಾಗಿವೆ. 5965 ಆಸ್ತಿಗಳಿಗೆ ಬಿ–ಖಾತೆಗಳಿವೆ ಎಂದರು.<br /><br />ಕೈಬರಹದಲ್ಲಿ ಖಾತೆ ಬರೆಯುತ್ತಿದ್ದಾಗ ಹಲವು ತಪ್ಪುಗಳಾಗುತ್ತಿದ್ದವು. ಕೆಲವರಿಗೆ ಮೋಸವಾಗುತ್ತಿತ್ತು. ಇದೆಲ್ಲದರ ನಡುವೆ ಜನರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. 2016ರಲ್ಲಿ ಇ–ಖಾತೆ ಪರಿಚಯ ಮಾಡಲಾಯಿತು. ಇದರಿಂದ ಜನರು ಖಾತೆಗಳಿಗಾಗಿ ಕಚೇರಿಗಳನ್ನು ಅಲೆದಾಡುವುದು ತಪ್ಪಿತು ಎಂದು ನಗರಸಭೆಯ ಪೌರಾಯುಕ್ತ ನೀಲಾಲೋಚನ ಪ್ರಭು ಹೇಳಿದರು.<br /><br />ಉದ್ಯಮಿಗಳಾದ ಬಿ.ವಿ.ಬೈರೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ಮಾಜಿ ನಿರ್ದೇಶಕ ಎಚ್.ಎಂ.ಸುಬ್ಬರಾಜು, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ನಾಮನಿರ್ದೇಶಿತ ಸದಸ್ಯ ಎನ್.ನಾಗರಾಜ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ಕುಮಾರ್, ಜಯರಾಜ್, ನಗರಸಭಾ ಸದಸ್ಯ ಗೌತಮ್, ನಾಗರಾಜ್, ಅಮ್ಜದ್, ರಮಾದೇವಿ, ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>