ಹದ್ದು ಹಾರಾಟ ಮಾಡುವಾಗ ಗಾಳಿಪಟವೊಂದು ದಾರದೊಂದಿಗೆ ಹಾರಿ ಬಂದು ಶಾಂತಿನಗರದ 1ನೇ ಕ್ರಾಸ್ನಲ್ಲಿನ ತೆಂಗಿನ ಮರಕ್ಕೆ ಸುತ್ತಿಕೊಂಡಿದೆ. ಆಹಾರ ಹುಡುಕುತ್ತ ಇದೇ ಮಾರ್ಗವಾಗಿ ಬಂದಿರುವ ಹದ್ದಿನ ರೆಕ್ಕೆಯೊಂದಕ್ಕೆ ಗಾಳಿಪಟದ ಸಣ್ಣದಾದ ಬಿಳಿ ದಾರ ಸುತ್ತಿಕೊಂಡಿದೆ. ರೆಕ್ಕೆ ಸಿಕ್ಕಿಕೊಳ್ಳುತ್ತಿದ್ದಂತೆ ಸಾಕಷ್ಟು ಒದ್ದಾಟ ನಡೆಸಿರುವ ಹದ್ದು ಬಿಡಿಸಿಕೊಳ್ಳಲು ಹರಸಾಹಸವನ್ನೇ ಮಾಡಿದೆ. ಆದರೆ ಗಾಳಿಪಟಕ್ಕೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ದಾರ ಹೆಚ್ಚು ಬಲಶಾಲಿಯಾಗಿದ್ದರಿಂದ ಇಡೀ ರಾತ್ರಿ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂದು ವಿವರಿಸಿದರು ಸ್ಥಳೀಯ ನಿವಾಸಿ ಅಮರ್.