ಎಚ್ಚರಿಕೆ ಕ್ರಮ: ಕಿರು ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನಲ್ಲಿ ರಸ್ತೆ ಹಾದು ಹೋಗಿರುವ ಕಡೆಗಳಲ್ಲಿ ಅರಣ್ಯ ಇಲಾಖೆ ಕಾವಲುಗಾರರು ಬೈಕ್ಗಳಲ್ಲಿ ಹಗಲಿನ ಮತ್ತು ಸಂಜೆ ವೇಳೆ ಗಸ್ತು ನಡೆಸುವ ಪದ್ಧತಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇದೆ. ಅರಣ್ಯ, ಬೆಟ್ಟದ ಸಾಲಿನ ರಸ್ತೆ ಬದಿಗಳಲ್ಲಿ ಕಿಡಿಗೇಡಿಗಳು ಬೆಂಕಿಹಚ್ಚಿದರೆ ಅಥವಾ ಬಿಡಿ, ಸಿಗರೇಟ್ ಬಿಸಾಡಿದರೂ ಬೆಂಕಿ ಬೇರೆಡೆಗೆ ರಾಚದಂತೆ ತಡೆಯುವ ಕ್ರಮ ಕೈಗೊಳ್ಳಬೇಕು.ಬೇಸಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ಮಾಹಿತಿ ನೀಡಲು, ಮಾಹಿತಿ ಬಂದ ತಕ್ಷಣ ಬೆಂಕಿ ನಂದಿಸುವ ಸಿಬ್ಬಂದಿ, ಸಿದ್ಧತೆ, ತಾತ್ಕಾಲಿನ ಕಂಟ್ರೋಲ್ ರೂಂ ಸ್ಥಾಪನೆ ಮಾಡುವಂತೆ ಹಲವು ವರ್ಷಗಳಿಂದಲೂ ಆಗ್ರಹಿಸುತ್ತಲೇ ಇದ್ದೇವೆ. ಆದರೆ, ಇಲ್ಲಿಯವರೆಗೂ ತಾಲ್ಲೂಕಿನ ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಂಡಿಯೇ ಇಲ್ಲ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ತಿಳಿಸಿದರು.