<p><strong>ಆನೇಕಲ್:</strong> ಇಲ್ಲಿನ ಅತ್ತಿಬೆಲೆ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗದ ಕಾರಣ ಹಣ ನೀಡುವಂತೆ ಒತ್ತಾಯಿಸಿದ ಟೋಲ್ ಸಿಬ್ಬಂದಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 9 ಮಂದಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.</p>.<p>ಹಲ್ಲೆಗೊಳಗಾದ ಚಾಲಕನನ್ನು ಆನೇಕಲ್ನ ಜಗದೀಶ್ (30) ಎಂದು ಗುರುತಿಸಲಾಗಿದೆ.</p>.<p>ಮಂಗಳವಾರ ಆನೇಕಲ್ನಿಂದ ಕೃಷ್ಣಗಿರಿಗೆ ಸರಕು ಸಾಗಾಣೆ ವಾಹನದಲ್ಲಿ ತೆರಳುತ್ತಿದ್ದಾಗಅತ್ತಿಬೆಲೆ ಟೋಲ್ನಲ್ಲಿ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗಲಿಲ್ಲ. ಈ ಸಂದರ್ಭದಲ್ಲಿ ಹಣವಿದೆ. ಆದರೆ, ಸ್ಕ್ಯಾನ್ ಆಗುತ್ತಿಲ್ಲ ಎಂದು ಹೇಳಿದೆ. ಆದರೂ, ಟೋಲ್ ಸಿಬ್ಬಂದಿ ಹಣ ನೀಡುವಂತೆ ಒತ್ತಾಯ ಮಾಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ದೂರು ನೀಡಿದ್ದಾರೆ.</p>.<p>‘ಟೋಲ್ನ ಕಚೇರಿಗೆ ಎಳೆದುಕೊಂಡು ಹೋಗಿ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗಿದ್ದ ಸ್ನೇಹಿತ ಹುಸೇನ್ ಮೇಲೆ ಸಹ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೂರಿನನ್ವಯ ಪೊಲೀಸರು ಟೋಲ್ ಸಿಬ್ಬಂದಿರಾಜೇಶ್, ನಾಗೇಶ್, ದೇವೇಂದ್ರ, ಮನೋಹರ್, ದಾಮೋಧರ್, ಪೂವಯ್ಯ, ವಿನೋದ್, ಕೇಶವ, ಮಂಜು ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong> ಇಲ್ಲಿನ ಅತ್ತಿಬೆಲೆ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗದ ಕಾರಣ ಹಣ ನೀಡುವಂತೆ ಒತ್ತಾಯಿಸಿದ ಟೋಲ್ ಸಿಬ್ಬಂದಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 9 ಮಂದಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.</p>.<p>ಹಲ್ಲೆಗೊಳಗಾದ ಚಾಲಕನನ್ನು ಆನೇಕಲ್ನ ಜಗದೀಶ್ (30) ಎಂದು ಗುರುತಿಸಲಾಗಿದೆ.</p>.<p>ಮಂಗಳವಾರ ಆನೇಕಲ್ನಿಂದ ಕೃಷ್ಣಗಿರಿಗೆ ಸರಕು ಸಾಗಾಣೆ ವಾಹನದಲ್ಲಿ ತೆರಳುತ್ತಿದ್ದಾಗಅತ್ತಿಬೆಲೆ ಟೋಲ್ನಲ್ಲಿ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗಲಿಲ್ಲ. ಈ ಸಂದರ್ಭದಲ್ಲಿ ಹಣವಿದೆ. ಆದರೆ, ಸ್ಕ್ಯಾನ್ ಆಗುತ್ತಿಲ್ಲ ಎಂದು ಹೇಳಿದೆ. ಆದರೂ, ಟೋಲ್ ಸಿಬ್ಬಂದಿ ಹಣ ನೀಡುವಂತೆ ಒತ್ತಾಯ ಮಾಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ದೂರು ನೀಡಿದ್ದಾರೆ.</p>.<p>‘ಟೋಲ್ನ ಕಚೇರಿಗೆ ಎಳೆದುಕೊಂಡು ಹೋಗಿ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗಿದ್ದ ಸ್ನೇಹಿತ ಹುಸೇನ್ ಮೇಲೆ ಸಹ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೂರಿನನ್ವಯ ಪೊಲೀಸರು ಟೋಲ್ ಸಿಬ್ಬಂದಿರಾಜೇಶ್, ನಾಗೇಶ್, ದೇವೇಂದ್ರ, ಮನೋಹರ್, ದಾಮೋಧರ್, ಪೂವಯ್ಯ, ವಿನೋದ್, ಕೇಶವ, ಮಂಜು ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>