ಆನೇಕಲ್: ಇಲ್ಲಿನ ಅತ್ತಿಬೆಲೆ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗದ ಕಾರಣ ಹಣ ನೀಡುವಂತೆ ಒತ್ತಾಯಿಸಿದ ಟೋಲ್ ಸಿಬ್ಬಂದಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 9 ಮಂದಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಚಾಲಕನನ್ನು ಆನೇಕಲ್ನ ಜಗದೀಶ್ (30) ಎಂದು ಗುರುತಿಸಲಾಗಿದೆ.
ಮಂಗಳವಾರ ಆನೇಕಲ್ನಿಂದ ಕೃಷ್ಣಗಿರಿಗೆ ಸರಕು ಸಾಗಾಣೆ ವಾಹನದಲ್ಲಿ ತೆರಳುತ್ತಿದ್ದಾಗಅತ್ತಿಬೆಲೆ ಟೋಲ್ನಲ್ಲಿ ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗಲಿಲ್ಲ. ಈ ಸಂದರ್ಭದಲ್ಲಿ ಹಣವಿದೆ. ಆದರೆ, ಸ್ಕ್ಯಾನ್ ಆಗುತ್ತಿಲ್ಲ ಎಂದು ಹೇಳಿದೆ. ಆದರೂ, ಟೋಲ್ ಸಿಬ್ಬಂದಿ ಹಣ ನೀಡುವಂತೆ ಒತ್ತಾಯ ಮಾಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ದೂರು ನೀಡಿದ್ದಾರೆ.
‘ಟೋಲ್ನ ಕಚೇರಿಗೆ ಎಳೆದುಕೊಂಡು ಹೋಗಿ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗಿದ್ದ ಸ್ನೇಹಿತ ಹುಸೇನ್ ಮೇಲೆ ಸಹ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೂರಿನನ್ವಯ ಪೊಲೀಸರು ಟೋಲ್ ಸಿಬ್ಬಂದಿರಾಜೇಶ್, ನಾಗೇಶ್, ದೇವೇಂದ್ರ, ಮನೋಹರ್, ದಾಮೋಧರ್, ಪೂವಯ್ಯ, ವಿನೋದ್, ಕೇಶವ, ಮಂಜು ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.