ಆನೇಕಲ್:ತಾಲ್ಲೂಕಿನ ಮೆಣಸಿಗನಹಳ್ಳಿ ಬಸವೇಶ್ವರ ಕಲಾ ಮಂಡಳಿಯಿಂದ ಸಂಗೀತ ವಿದ್ವಾನ್ ಮಲ್ಲೇಶಾರಾಧ್ಯರ ಸ್ಮರಣಾರ್ಥ ಮಾರ್ಚ್ 10ರಂದು ಗಡಿನಾಡು ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಆನೇಕಲ್ ಸಮೀಪದ ಬಿಳಿನೀರ ಕುಂಟೆ ಬಳಿಯ ಸಾಯಿರುಕ್ಮಿಣಿ ಕಲ್ಯಾಣ ಮಹಲ್ ಆವರಣದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಎಂ. ಚಂದ್ರಪ್ಪ ತಿಳಿಸಿದ್ದಾರೆ.
ಎಂ.ಸಿ. ಯೋಗಾನಂದೀಶಾರಾಧ್ಯ ಅವರ ನಿರ್ದೇಶನದಲ್ಲಿ ನಾಟಕ ನಡೆಯುತ್ತಿದ್ದು ರಾಜಾಪುರ ಸ್ವಾಮೀಜಿ, ಗುಮ್ಮಳಾಪುರ ಶ್ರೀ, ಬೆಳ್ಳಾವಿ ಶ್ರೀ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಬಿ. ಶಿವಣ್ಣ, ವೈ. ಪ್ರಕಾಶ್, ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.