ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಗಡಿನಾಡು ರಂಗೋತ್ಸವ ಇಂದು

Last Updated 10 ಮಾರ್ಚ್ 2022, 2:34 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ಮೆಣಸಿಗನಹಳ್ಳಿ ಬಸವೇಶ್ವರ ಕಲಾ ಮಂಡಳಿಯಿಂದ ಸಂಗೀತ ವಿದ್ವಾನ್‌ ಮಲ್ಲೇಶಾರಾಧ್ಯರ ಸ್ಮರಣಾರ್ಥ ಮಾರ್ಚ್‌ 10ರಂದು ಗಡಿನಾಡು ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಆನೇಕಲ್‌ ಸಮೀಪದ ಬಿಳಿನೀರ ಕುಂಟೆ ಬಳಿಯ ಸಾಯಿರುಕ್ಮಿಣಿ ಕಲ್ಯಾಣ ಮಹಲ್‌ ಆವರಣದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಎಂ. ಚಂದ್ರಪ್ಪ ತಿಳಿಸಿದ್ದಾರೆ.

ಎಂ.ಸಿ. ಯೋಗಾನಂದೀಶಾರಾಧ್ಯ ಅವರ ನಿರ್ದೇಶನದಲ್ಲಿ ನಾಟಕ ನಡೆಯುತ್ತಿದ್ದು ರಾಜಾಪುರ ಸ್ವಾಮೀಜಿ, ಗುಮ್ಮಳಾಪುರ ಶ್ರೀ, ಬೆಳ್ಳಾವಿ ಶ್ರೀ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಬಿ. ಶಿವಣ್ಣ, ವೈ. ಪ್ರಕಾಶ್‌, ಪುರಸಭಾ ಅಧ್ಯಕ್ಷ ಎನ್‌.ಎಸ್. ಪದ್ಮನಾಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT