ದೊಡ್ಡಬಳ್ಳಾಪುರ:‘ನಗರ ಪ್ರದೇಶದ ಮಕ್ಕಳಿಗೆ ದೈಹಿಕ ವ್ಯಾಯಾಮವೇ ಇಲ್ಲದಾಗಿದೆ. ಬೆಳಗಿನಿಂದ ಸಂಜೆವರೆಗೂ ಪಾಠದಲ್ಲೇ ಕಾಲ ಕಳೆಯುತ್ತಾರೆ. ಒಂದಿಷ್ಟು ಸಮಯ ಟಿವಿ ನೋಡುವುದರಲ್ಲೇ ದಿನ ದೂಡುತ್ತಿದ್ದಾರೆ’ ಎಂದು ಅರವಿಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ವಿಷಾದಿಸಿದರು.
ಸಂಸ್ಥೆಯಲ್ಲಿ ಏರ್ಪಡಿಸಿದ್ದ ‘ವಾರ್ಷಿಕ ಕ್ರೀಡಾಕೂಟ‘ದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ, ದೈಹಿಕ ಸಾಮರ್ಥ್ಯ ವೃದ್ದಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎನ್.ಲಕ್ಷ್ಮಿನರಸಿಂಹ, ಜಂಟಿ ಕಾರ್ಯದರ್ಶಿ ಸರಸ್ವತಮ್ಮ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎನ್.ವಸಂತರಾಜು ಇದ್ದರು.