ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಗಿರಿ ರೆಸಾರ್ಟ್‌ಗೆ ಮಾರ್ಗ ಬದಲಿಸಿದ ಜೆಡಿಎಸ್‌ ಶಾಸಕರು

Last Updated 8 ಜುಲೈ 2019, 14:18 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಾಗುತ್ತಿದ್ದಂತೆ ರೆಸಾರ್ಟ್‌ ರಾಜಕಾರಣ ಮುನ್ನೆಲೆಗೆ ಬಂದಿದೆ.

ಕೊಡಗಿನ ರೆಸಾರ್ಟ್‌ಗೆ ತೆರಳಬೇಕಿದ್ದ ಜೆಡಿಎಸ್ ಶಾಸಕರು ಮಾರ್ಗ ಬದಲಾಯಿಸಿದ್ದು ಕೊಡಗು ರೆಸಾರ್ಟ್ ವಾಸ್ತವ್ಯ ರದ್ದು ಮಾಡಿ ಬೆಂಗಳೂರು ಸಮೀಪದ ದೇವನಹಳ್ಳಿ ಬಳಿಯ ನಂದಿಗಿರಿಯ ಧಾಮದ ಪ್ರೆಸ್ಟಿಂಜ್ ಗಾಲ್ಫ್‌ ಕ್ಲಬ್‌ ರೆಸಾರ್ಟ್‌ಗೆ ತೆರಳಿದ್ದಾರೆ.

ನಂದಿಗಿರಿಯ ಧಾಮದ ಪ್ರೆಸ್ಟಿಂಜ್ ಗಾಲ್ಫ್‌ ಕ್ಲಬ್‌ ರೆಸಾರ್ಟ್‌ನಲ್ಲಿ ಜೆಡಿಎಸ್‌ ಶಾಸಕರು ತಂಗಿದ್ದು, ರಾತ್ರಿ 9 ಗಂಟೆಗೆ ರೆಸಾರ್ಟ್‌ಗೆ ತೆರಳಿ ಸಿದ್ದರಾಮಯ್ಯ ಅವರು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ 7ನೇ ಹೊಸಕೋಟೆಯ ಪ್ಯಾಡಿಂಗ್‌ಟನ್ ರೆಸಾರ್ಟ್‌ನಲ್ಲಿ 35 ರೂಂ ಬುಕ್‌ ಮಾಡಲಾಗಿತ್ತು.

ಗೋವಾದತ್ತ ಅತೃಪ್ತ ಶಾಸಕರು

ಈಗಾಗಲೇ ಮುಂಬೈನ ಸಿಯೋಟಲ್‌ ಹೋಟೆಲ್‌ನಲ್ಲಿ ಶನಿವಾರದಿಂದ ತಂಗಿದ್ದ13 ಅತೃಪ್ತ ಶಾಸಕರು ಗೋವಾದತ್ತ ಮುಖ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT