<p><strong>ಆನೇಕಲ್: </strong>ತಾಲ್ಲೂಕಿನ ಗಟ್ಟಹಳ್ಳಿಯಲ್ಲಿ ಶ್ರೀಕನಕ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಗ್ರಾಮದ ಕನಕದಾಸರ ಪುತ್ಥಳಿಗೆ ಅಲಂಕಾರ ಮಾಡಲಾಗಿತ್ತು. ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸ್ತ್ರೀಶಕ್ತಿ ಸಂಘಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಸಮ ಸಮಾಜದ ನಿರ್ಮಾಣಕ್ಕೆ ಕನಕದಾಸರ ತತ್ವ ಮತ್ತು ಸಿದ್ದಾಂತ ಇಂದಿನ ಅಗತ್ಯ ಎಂದು ಕುರುಬರ ಸಂಘದ ನಿರ್ದೇಶಕ ಗಟ್ಟಹಳ್ಳಿ ಆಂಜಿನಪ್ಪ ಹಾಗೂ ಕನಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಭಿಪ್ರಾಯಪಟ್ಟರು.</p>.<p>ಕೇಂದ್ರ ಮಾಜಿ ಸಚಿವ ಈ ನಾರಾಯಣಸ್ವಾಮಿ,ಶಾಸಕ ಬಿ ಶಿವಣ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ನಿರ್ದೇಶಕ ಇಂಡ್ಲಬೆಲೆ ನರಸಿಂಹಮೂರ್ತಿ, ಗಟ್ಟಹಳ್ಳಿ ಸೀನಪ್ಪ, ರೂಪೇಶ್, ನಾಗರಾಜ್, ಅರುಣ್ ಕುಮಾರ್, ರವಿ ಕುಮಾರ್, ಬೊಮ್ಮಸಂದ್ರ ಲಿಂಗಣ್ಣ, ಹಳೆಚಂದಾಪುರ ರಾಮು, ವಿಜಯಲಕ್ಷ್ಮಿ, ರಾಮಕೃಷ್ಣಪ್ಪ,ರಮೇಶ್, ಕಾವೇರಪ್ಪ, ಬೀರೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಗಟ್ಟಹಳ್ಳಿಯಲ್ಲಿ ಶ್ರೀಕನಕ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಗ್ರಾಮದ ಕನಕದಾಸರ ಪುತ್ಥಳಿಗೆ ಅಲಂಕಾರ ಮಾಡಲಾಗಿತ್ತು. ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸ್ತ್ರೀಶಕ್ತಿ ಸಂಘಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಸಮ ಸಮಾಜದ ನಿರ್ಮಾಣಕ್ಕೆ ಕನಕದಾಸರ ತತ್ವ ಮತ್ತು ಸಿದ್ದಾಂತ ಇಂದಿನ ಅಗತ್ಯ ಎಂದು ಕುರುಬರ ಸಂಘದ ನಿರ್ದೇಶಕ ಗಟ್ಟಹಳ್ಳಿ ಆಂಜಿನಪ್ಪ ಹಾಗೂ ಕನಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಭಿಪ್ರಾಯಪಟ್ಟರು.</p>.<p>ಕೇಂದ್ರ ಮಾಜಿ ಸಚಿವ ಈ ನಾರಾಯಣಸ್ವಾಮಿ,ಶಾಸಕ ಬಿ ಶಿವಣ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ನಿರ್ದೇಶಕ ಇಂಡ್ಲಬೆಲೆ ನರಸಿಂಹಮೂರ್ತಿ, ಗಟ್ಟಹಳ್ಳಿ ಸೀನಪ್ಪ, ರೂಪೇಶ್, ನಾಗರಾಜ್, ಅರುಣ್ ಕುಮಾರ್, ರವಿ ಕುಮಾರ್, ಬೊಮ್ಮಸಂದ್ರ ಲಿಂಗಣ್ಣ, ಹಳೆಚಂದಾಪುರ ರಾಮು, ವಿಜಯಲಕ್ಷ್ಮಿ, ರಾಮಕೃಷ್ಣಪ್ಪ,ರಮೇಶ್, ಕಾವೇರಪ್ಪ, ಬೀರೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>