‘ಇದಕ್ಕಾಗಿ ಸರ್ಕಾರದ ನೆರವನ್ನೇ ಅಪೇಕ್ಷಿಸದೇ ಸಮು ದಾಯವೂ ಭಾಗವಹಿಸಬೇಕಿದೆ. ಕಲೆ ನಮ್ಮ ಸಂಸ್ಕೃತಿಯ ಭಾಗ ಎಂದು ಮನಗಂಡು ಜನಸಾಮಾನ್ಯರೇ ಇದಕ್ಕೆ ವಾರಸುದಾರರಾಗಬೇಕಿದೆ’ ಎಂದರು. ಕರ್ನಾಟಕ ಯಕ್ಷಗಾನ ಅಕಾ ಡೆಮಿಯ ಅಧ್ಯಕ್ಷ ಎಂ.ಎ.ಹೆಗಡೆ ಮಾತನಾಡಿ, ಮೂಡಲಪಾಯ ಯಕ್ಷಗಾನಕ್ಕೂ ತನ್ನದೇ ಆದ ಆಸ್ಮಿತೆ ಯಿದೆ. ಈ ಪ್ರಕಾರವನ್ನು ಪ್ರದರ್ಶಿಸುವ ಕಲಾವಿದರು ವೇಷಭೂಷಣ, ಭಾಗವತಿಕೆ, ರಂಗಸಜ್ಜಿಕೆ ಇವುಗಳ ವೈಶಿಷ್ಟ್ಯ ಹೇಗಿದೆಯೋ ಹಾಗೆ ಮುಂದುವರೆಸಿಕೊಂಡು ಹೋಗ ಬೇಕಾಗಿದೆ. ಇಲ್ಲವಾದಲ್ಲಿ ಇದು ನಾಟಕ ವೆನಿಸಿಕೊಳ್ಳುತ್ತದೆ. ಸಾಂಪ್ರದಾಯಿಕತೆ ಯನ್ನು ಉಳಿಸಿಕೊಂಡು ಇಂದಿನ ಅಗತ್ಯಗಳಿಗೆ ತಕ್ಕಂತೆ ಪ್ರದರ್ಶನ ನೀಡಬೇಕು ಎಂದರು.