ಚಿಕ್ಕನಾಗಮಂಗಲ ಸರ್ವೆ ನಂ. 32ರಲ್ಲಿ 0.03ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದರು. ಸರ್ಜಾಪುರ ಹೋಬಳಿಯ ರಾಯಸಂದ್ರದಲ್ಲಿ 35.08 ಗುಂಟೆ ಕೆರೆಯನ್ನು ಒತ್ತುವರಿ ಮಾಡಲಾಗಿತ್ತು. ಬಿ. ಹೊಸಹಳ್ಳಿಯಲ್ಲಿ ಸರ್ವೆ ನಂ. 16ರಲ್ಲಿ 1.39 ಎಕರೆ ಕೆರೆ ಜಮೀನನ್ನು ಶ್ರೀನಿವಾಸರೆಡ್ಡಿ, ಎಚ್.ಎನ್. ವೆಂಕಟಸ್ವಾಮಿ, ಅಶೋಕ್, ಲಕ್ಷ್ಮಣರೆಡ್ಡಿ, ಅಶೋಕ್, ಆನಂದ್, ನಂಬಯ್ಯ, ಆನಂದರೆಡ್ಡಿ, ಚಂದ್ರಮ್ಮ, ಯಲ್ಲಾರೆಡ್ಡಿ ಎಂಬುವವರು ಒತ್ತುವರಿ ಮಾಡಿದ್ದರು ಎಂದುವಿವರಿಸಿದರು.