ಕುರಿಗಳ ಶಬ್ದಕ್ಕೆ ರೈತ ಚೆನ್ನರಾಯಪ್ಪ ಹಾಗೂ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ತೆರಳಿದಾಗ, ಚಿರತೆ ಸ್ಥಳದಿಂದ ಪರಾರಿಯಾಗಿದೆ. ಚಿರತೆ ಸೆರೆಹಿಡಿಯಲು ಮುಂದಾಗದ ಅರಣ್ಯ ಇಲಾಖೆ ನಡೆಯಿಂದಾಗಿ ಸಾಕು ಪ್ರಾಣಿಗಳಾದ ಹಸು, ಕುರಿ, ಮೇಕೆ, ನಾಯಿ, ಕೋಳಿಯಂತ ಪ್ರಾಣಿಗಳನ್ನು ಚಿರತೆ ಬಲಿಪಡೆಯುತ್ತಿರುವ ಘಟನೆ ಪದೇ ಪದೇ ನಡೆಯುತ್ತಿದ್ದರು, ರೈತರು ಅಸಹಾಯಕರಾಗಿ ನಷ್ಟವನ್ನು ಅನುಭವಿಸುವಂತಾಗಿದೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.