<p><strong>ಚನ್ನರಾಯಪಟ್ಟಣ</strong> (ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರದಲ್ಲಿರುವ ಪ್ರಸನ್ನ ಪಾರ್ವತಿ ಸಮೇತ ಸೋಮೇಶ್ವರ ದೇಗುಲ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು.</p>.<p>ನಂದಿ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ವಿವಿಧ ವಾದ್ಯಗಳ ವಾದನದೊಂದಿಗೆ ಜೋಡೆತ್ತುಗಳು ರಥದ ಮುಂದೆ ಸಾಗಿದರೇ, ಹರ ಹರ ಮಹಾದೇವ ಎಂಬ ಘೋಷಣ ಮಾಡಿದರು ಭಕ್ತರು. ರಥವು ಗಂಗವಾರದಿಂದ ತಬ್ಬು ಲಿಂಗೇಶ್ವರ ದೇಗುಲದವರೆಗೂ ಸಾಗಿತು.</p>.<p>ದಾರಿಯುದ್ದಕ್ಕೂ ಕಾರ್ಯಕ್ರಮದ ಆಯೋಜಕರು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಭಕ್ತರಿಗೆ ವಿತರಣೆ ಮಾಡಿದರು. ರಥ ಸಾಗುವ ಬೀದಿಗಳಲ್ಲಿ ನೀರು ಹಾಕಿ ಶುಚ್ಚಿಗೊಳ್ಳಿಸಿ ದೇವರನ್ನು ಕಂಡು ಭಕ್ತರು ನಮಿಸಿದರು.</p>.<p>ಸೋಮೇಶ್ವರನ ವರ ದರ್ಶನಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತು, ನಮಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಹೆಂಗೆಳೆಯರು ಶಿವನಾಮ ಹಾಡುಗಳ ಹಾಡಿ ನೆರೆದಿದ್ದ ಭಕ್ತರಲ್ಲಿ ಭಕ್ತಿ,ಭಾವ ಹೆಚ್ಚಿಸಿದರು.</p>.<p>ಕುಟುಂಬ ಸಮೇತರಾಗಿ ಜನರು ದೇಗುಲಕ್ಕೆ ಭೇಟಿ ದರ್ಶನ ಪಡೆದರು.</p>.<p>ಗರ್ಭಗುಡಿಯಲ್ಲಿರುವ ಪಾರ್ವತಿ ದೇವಿಯ ದರ್ಶನ ಪಡೆದು ಕೋಷ್ಟಕಗಳಲ್ಲಿ ಗಣಪತಿ ಶಿಲ್ಪ, ದೇಗುಲದ ಸುತ್ತವಿರುವ ಸೂರ್ಯ, ಭೈರವ, ಕಾರ್ತಿಕೇಯ, ನಂದಿ ಪ್ರದಕ್ಷಣೆ ಹಾಕಿ ರಥೋತ್ಸವದಲ್ಲಿ ಭಾಗಿಯಾದರು.</p>.<p>ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಮೇಗೌಡ, ಚೈತ್ರಾ ಮನೋಹರ್, ತಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಣ್ಗೌಡ, ಮಂಜುನಾಥ್, ಗ್ರಾ.ಪಂ ಸದಸ್ಯರಾದ ಅಶ್ವಥ್ನಾರಾಯಣ್, ನಾರಾಯಣಸ್ವಾಮಿ, ಗ್ರಾಮದ ಬೈರೇಗೌಡ, ಕೃಷ್ಣಪ್ಪ, ಬೈಚಾಪುರ ಶಶಿಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong> (ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರದಲ್ಲಿರುವ ಪ್ರಸನ್ನ ಪಾರ್ವತಿ ಸಮೇತ ಸೋಮೇಶ್ವರ ದೇಗುಲ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು.</p>.<p>ನಂದಿ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ವಿವಿಧ ವಾದ್ಯಗಳ ವಾದನದೊಂದಿಗೆ ಜೋಡೆತ್ತುಗಳು ರಥದ ಮುಂದೆ ಸಾಗಿದರೇ, ಹರ ಹರ ಮಹಾದೇವ ಎಂಬ ಘೋಷಣ ಮಾಡಿದರು ಭಕ್ತರು. ರಥವು ಗಂಗವಾರದಿಂದ ತಬ್ಬು ಲಿಂಗೇಶ್ವರ ದೇಗುಲದವರೆಗೂ ಸಾಗಿತು.</p>.<p>ದಾರಿಯುದ್ದಕ್ಕೂ ಕಾರ್ಯಕ್ರಮದ ಆಯೋಜಕರು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಭಕ್ತರಿಗೆ ವಿತರಣೆ ಮಾಡಿದರು. ರಥ ಸಾಗುವ ಬೀದಿಗಳಲ್ಲಿ ನೀರು ಹಾಕಿ ಶುಚ್ಚಿಗೊಳ್ಳಿಸಿ ದೇವರನ್ನು ಕಂಡು ಭಕ್ತರು ನಮಿಸಿದರು.</p>.<p>ಸೋಮೇಶ್ವರನ ವರ ದರ್ಶನಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತು, ನಮಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಹೆಂಗೆಳೆಯರು ಶಿವನಾಮ ಹಾಡುಗಳ ಹಾಡಿ ನೆರೆದಿದ್ದ ಭಕ್ತರಲ್ಲಿ ಭಕ್ತಿ,ಭಾವ ಹೆಚ್ಚಿಸಿದರು.</p>.<p>ಕುಟುಂಬ ಸಮೇತರಾಗಿ ಜನರು ದೇಗುಲಕ್ಕೆ ಭೇಟಿ ದರ್ಶನ ಪಡೆದರು.</p>.<p>ಗರ್ಭಗುಡಿಯಲ್ಲಿರುವ ಪಾರ್ವತಿ ದೇವಿಯ ದರ್ಶನ ಪಡೆದು ಕೋಷ್ಟಕಗಳಲ್ಲಿ ಗಣಪತಿ ಶಿಲ್ಪ, ದೇಗುಲದ ಸುತ್ತವಿರುವ ಸೂರ್ಯ, ಭೈರವ, ಕಾರ್ತಿಕೇಯ, ನಂದಿ ಪ್ರದಕ್ಷಣೆ ಹಾಕಿ ರಥೋತ್ಸವದಲ್ಲಿ ಭಾಗಿಯಾದರು.</p>.<p>ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಮೇಗೌಡ, ಚೈತ್ರಾ ಮನೋಹರ್, ತಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಣ್ಗೌಡ, ಮಂಜುನಾಥ್, ಗ್ರಾ.ಪಂ ಸದಸ್ಯರಾದ ಅಶ್ವಥ್ನಾರಾಯಣ್, ನಾರಾಯಣಸ್ವಾಮಿ, ಗ್ರಾಮದ ಬೈರೇಗೌಡ, ಕೃಷ್ಣಪ್ಪ, ಬೈಚಾಪುರ ಶಶಿಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>