ಉತ್ಸವದಲ್ಲಿ ಸಚಿವ ಎಂಟಿಬಿ ಭಾಗಿ

ಹೊಸಕೋಟೆ: ‘ದೇವಾಲಯಗಳ ಬೀಡಾಗಿರುವ ಹೊಸಕೋಟೆಯ ಜನತೆಗೆ ಶಾಂತಿ, ನೆಮ್ಮದಿ, ಸುಖ ಸಂಪತ್ತನ್ನು ದೇವರು ದಯ ಪಾಲಿಸಲಿ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.
ನಗರದ ಪಾರ್ವತೀಪುರದ ಊರ ಬಾಗಿಲು ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನದೇವಾಲಯಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರಿಗೆ ಸಚಿವರು ಪ್ರಸಾದ ವಿತರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್, ಉಪಾಧ್ಯಕ್ಷೆ ಸುಗುಣಾ ಮೋಹನ್, ಸದಸ್ಯರಾದ ವೆಂಕಟೇಶ್, ಅರುಣ್ ಕುಮಾರ್, ಕೆಆರ್ಬಿ ಶೋಭಾ ಶಿವಾನಂದ್, ಸೋಮಶೇಖರ್, ಮುಖಂಡರಾದ ಜಯಕುಮಾರ್, ವೆಂಕಟೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.