<p><strong>ಗದಗ: </strong>ಹೊಸ ಬಡಾವಣೆಯಾಗಿ ಅಸ್ತಿತ್ವಕ್ಕೆ ಬಂದು ಒಂದೂವರೆ ದಶಕ ಕಳೆದರೂ ಇಲ್ಲಿ ಸಮರ್ಪಕ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಎಲ್ಲ ಕಡೆ ಮಣ್ಣಿನ ರಸ್ತೆಗಳು. ಈ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಪಾದಚಾರಿಗಳು, ವಾಹನ ಸವಾರರ ಪಾಡು ಹೇಳತೀರದು. ಮನೆ ತಲುಪಬೇಕಾದರೆ, ಅಥವಾ ಮನೆಯಿಂದ ಹೊರಬೀಳಬೇಕಾದರೆ ನೇರವಾಗಿ ಗುಂಡಿಯಲ್ಲೇ ಕಾಲಿರಿಸಿ, ಸರ್ಕಸ್ ಮಾಡುತ್ತಾ ಮುನ್ನುಗ್ಗಬೇಕು. ಇದು ಎಸ್.ಎಂ.ಕೃಷ್ಣ ನಗರ.</p>.<p>ನಗರದ ನಡುವಿನಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿಯಿಂದ ಒಂದೂವರೆಗೆ ಕಿ.ಮೀ. ಅಂತರದಲ್ಲಿದೆ ಈ ಆಶ್ರಯ ಕಾಲೊನಿ. ಇಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಸ್ವಲ್ಪ ಮಳೆಯಾದರೂ ರಸ್ತೆ ಕೆಸರುಗದ್ದೆಯಾಗುತ್ತದೆ. ಸಂಚಾರ ಸಂಕಟವಾಗುತ್ತದೆ. ಇಲ್ಲಿನ ಗುಂಡಿಗಳ ನಡುವಿನಿಂದಲೇ ವಾಹನಗಳು ಸಾಗಿ, ಈ ಗುಂಡಿಗಳು ಗಾತ್ರದಲ್ಲಿ ದೊಡ್ಡದಾಗಿವೆ. ಮಳೆಯಾದರೆ ಇಲ್ಲಿ ನೀರು ನಿಂತುಕೊಳ್ಳುತ್ತದೆ. ಇಡೀ ಬಡಾವಣೆ ಜಲಾವೃತಗೊಳ್ಳುತ್ತದೆ. ರಾತ್ರಿ ವೇಳೆ ವೃದ್ಧರು, ಮಹಿಳೆಯರು, ಮಕ್ಕಳು ಗುಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ‘ಇಲ್ಲಿನ ರಸ್ತೆಯಲ್ಲಿ ನಡೆಯಬೇಕಾದರೆ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಗುಂಡಿಯಲ್ಲಿ ಬೀಳುವುದು ಖಾತರಿ’ ಎಂದು ಅಲ್ಲಿನ ನಿವಾಸಿಗಳು ಹೇಳಿದರು.</p>.<p>ವಾರ್ಡ್ ನಂಬರ್ 1ರ ವ್ಯಾಪ್ತಿಗೆ ಬರುವ ಈ ಕಾಲೊನಿಯಲ್ಲಿ 12 ಮುಖ್ಯರಸ್ತೆಗಳು, 25ಕ್ಕೂ ಹೆಚ್ಚು ಉಪ ರಸ್ತೆಗಳಿವೆ. ಕಳೆದ 3 ವರ್ಷದಲ್ಲಿ ಡಾಂಬರ್, ಸಿಮೆಂಟ್ ರಸ್ತೆ ಸೇರಿ 10 ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ರಸ್ತೆಗೆ ಇಂಟರ್ಲಾಕ್ ಹಾಕಲಾಗಿದೆ. ಹೊಂಬಳ ಗೇಟ್ನಿಂದ ಬಡವಾಣೆಗೆ ಸಂಪರ್ಕಿಸುವ ರಸ್ತೆ ಹಾಗೂ ಎಎಸ್ಎಸ್ ಕಾಲೇಜಿನಿಂದ ಆಶ್ರಯ ಕಾಲೊನಿವರೆಗಿನ ಮುಖ್ಯರಸ್ತೆ ಹಾಳಾಗಿದೆ.</p>.<p>‘ರಸ್ತೆ ಅಗೆದು ಒಳಚರಂಡಿ, ನೀರಿನ ಯೋಜನೆ ಕಾಮಗಾರಿ ಕೈಗೊಳ್ಳಲಾಯಿತು. ಮಳೆಯಾದಾಗ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ’ ಎಂದು ಬಡಾವಣೆ ನಿವಾಸಿ ಚಂದ್ರಶೇಖರ ಕೊಡ್ಲಿ, ಪಿ.ಎಸ್.ಕೌತಾಳ, ಕೆ.ಬಿ.ರಾಮಗಿರಿ ಗೋಳು ತೋಡಿಕೊಂಡರು.</p>.<p>‘ಈ ವಾರ್ಡ್ ಸದಸ್ಯರು ರಸ್ತೆ ಅಭಿವೃದ್ಧಿಗೆ, ಸಮರ್ಪಕ ನೀರಿನ ಪೂರೈಕೆಗೆ, ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು’ ಎಂದು ಇಲ್ಲಿನ ನಿವಾಸಿಗಳಾದ ಎಸ್.ಎಂ.ಕೊಟಗಿ, ಅರುಣಕುಮಾರ ಬಿಂಗಿ ಒತ್ತಾಯಿಸಿದರು.</p>.<p>**<br /> 1ನೇ ವಾರ್ಡ್ ದೊಡ್ಡದಾಗಿದ್ದು, ಇಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚುವರಿ ಅನುದಾನದ ಕೊರತೆ ಇದೆ. ನಗರಸಭೆ ಅನುದಾನದಲ್ಲಿ ಈಗಾಗಲೇ 10 ರಸ್ತೆ ನಿರ್ಮಿಸಲಾಗಿದೆ<br /> -<strong> ಅಮೃತಾ ಪಾಟೀಲ, 1ನೇ ವಾರ್ಡ್ ಸದಸ್ಯೆ</strong></p>.<p><strong>ಹುಚ್ಚೇಶ್ವರ ಅಣ್ಣಿಗೇರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಹೊಸ ಬಡಾವಣೆಯಾಗಿ ಅಸ್ತಿತ್ವಕ್ಕೆ ಬಂದು ಒಂದೂವರೆ ದಶಕ ಕಳೆದರೂ ಇಲ್ಲಿ ಸಮರ್ಪಕ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಎಲ್ಲ ಕಡೆ ಮಣ್ಣಿನ ರಸ್ತೆಗಳು. ಈ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಪಾದಚಾರಿಗಳು, ವಾಹನ ಸವಾರರ ಪಾಡು ಹೇಳತೀರದು. ಮನೆ ತಲುಪಬೇಕಾದರೆ, ಅಥವಾ ಮನೆಯಿಂದ ಹೊರಬೀಳಬೇಕಾದರೆ ನೇರವಾಗಿ ಗುಂಡಿಯಲ್ಲೇ ಕಾಲಿರಿಸಿ, ಸರ್ಕಸ್ ಮಾಡುತ್ತಾ ಮುನ್ನುಗ್ಗಬೇಕು. ಇದು ಎಸ್.ಎಂ.ಕೃಷ್ಣ ನಗರ.</p>.<p>ನಗರದ ನಡುವಿನಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿಯಿಂದ ಒಂದೂವರೆಗೆ ಕಿ.ಮೀ. ಅಂತರದಲ್ಲಿದೆ ಈ ಆಶ್ರಯ ಕಾಲೊನಿ. ಇಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಸ್ವಲ್ಪ ಮಳೆಯಾದರೂ ರಸ್ತೆ ಕೆಸರುಗದ್ದೆಯಾಗುತ್ತದೆ. ಸಂಚಾರ ಸಂಕಟವಾಗುತ್ತದೆ. ಇಲ್ಲಿನ ಗುಂಡಿಗಳ ನಡುವಿನಿಂದಲೇ ವಾಹನಗಳು ಸಾಗಿ, ಈ ಗುಂಡಿಗಳು ಗಾತ್ರದಲ್ಲಿ ದೊಡ್ಡದಾಗಿವೆ. ಮಳೆಯಾದರೆ ಇಲ್ಲಿ ನೀರು ನಿಂತುಕೊಳ್ಳುತ್ತದೆ. ಇಡೀ ಬಡಾವಣೆ ಜಲಾವೃತಗೊಳ್ಳುತ್ತದೆ. ರಾತ್ರಿ ವೇಳೆ ವೃದ್ಧರು, ಮಹಿಳೆಯರು, ಮಕ್ಕಳು ಗುಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ‘ಇಲ್ಲಿನ ರಸ್ತೆಯಲ್ಲಿ ನಡೆಯಬೇಕಾದರೆ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಗುಂಡಿಯಲ್ಲಿ ಬೀಳುವುದು ಖಾತರಿ’ ಎಂದು ಅಲ್ಲಿನ ನಿವಾಸಿಗಳು ಹೇಳಿದರು.</p>.<p>ವಾರ್ಡ್ ನಂಬರ್ 1ರ ವ್ಯಾಪ್ತಿಗೆ ಬರುವ ಈ ಕಾಲೊನಿಯಲ್ಲಿ 12 ಮುಖ್ಯರಸ್ತೆಗಳು, 25ಕ್ಕೂ ಹೆಚ್ಚು ಉಪ ರಸ್ತೆಗಳಿವೆ. ಕಳೆದ 3 ವರ್ಷದಲ್ಲಿ ಡಾಂಬರ್, ಸಿಮೆಂಟ್ ರಸ್ತೆ ಸೇರಿ 10 ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ರಸ್ತೆಗೆ ಇಂಟರ್ಲಾಕ್ ಹಾಕಲಾಗಿದೆ. ಹೊಂಬಳ ಗೇಟ್ನಿಂದ ಬಡವಾಣೆಗೆ ಸಂಪರ್ಕಿಸುವ ರಸ್ತೆ ಹಾಗೂ ಎಎಸ್ಎಸ್ ಕಾಲೇಜಿನಿಂದ ಆಶ್ರಯ ಕಾಲೊನಿವರೆಗಿನ ಮುಖ್ಯರಸ್ತೆ ಹಾಳಾಗಿದೆ.</p>.<p>‘ರಸ್ತೆ ಅಗೆದು ಒಳಚರಂಡಿ, ನೀರಿನ ಯೋಜನೆ ಕಾಮಗಾರಿ ಕೈಗೊಳ್ಳಲಾಯಿತು. ಮಳೆಯಾದಾಗ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ’ ಎಂದು ಬಡಾವಣೆ ನಿವಾಸಿ ಚಂದ್ರಶೇಖರ ಕೊಡ್ಲಿ, ಪಿ.ಎಸ್.ಕೌತಾಳ, ಕೆ.ಬಿ.ರಾಮಗಿರಿ ಗೋಳು ತೋಡಿಕೊಂಡರು.</p>.<p>‘ಈ ವಾರ್ಡ್ ಸದಸ್ಯರು ರಸ್ತೆ ಅಭಿವೃದ್ಧಿಗೆ, ಸಮರ್ಪಕ ನೀರಿನ ಪೂರೈಕೆಗೆ, ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು’ ಎಂದು ಇಲ್ಲಿನ ನಿವಾಸಿಗಳಾದ ಎಸ್.ಎಂ.ಕೊಟಗಿ, ಅರುಣಕುಮಾರ ಬಿಂಗಿ ಒತ್ತಾಯಿಸಿದರು.</p>.<p>**<br /> 1ನೇ ವಾರ್ಡ್ ದೊಡ್ಡದಾಗಿದ್ದು, ಇಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚುವರಿ ಅನುದಾನದ ಕೊರತೆ ಇದೆ. ನಗರಸಭೆ ಅನುದಾನದಲ್ಲಿ ಈಗಾಗಲೇ 10 ರಸ್ತೆ ನಿರ್ಮಿಸಲಾಗಿದೆ<br /> -<strong> ಅಮೃತಾ ಪಾಟೀಲ, 1ನೇ ವಾರ್ಡ್ ಸದಸ್ಯೆ</strong></p>.<p><strong>ಹುಚ್ಚೇಶ್ವರ ಅಣ್ಣಿಗೇರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>