ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರಸ್ತುತ ಗ್ರಾಮಾಂತರ ಜಿಲ್ಲೆಯಲ್ಲಿ ಭೂ ಸುಧಾರಣೆಗೆ ಸಂಬಂಧಿಸಿದಂತೆ 80 ಸಾವಿರ 79ಎ ಮತ್ತು ಬಿ ಪ್ರಕರಣಗಳಿವೆ. ನೂರಾರು ರೈತರು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. 79 ಎ.ಬಿ. ಒಂದು ಪ್ರಕರಣಕ್ಕೆ ಪುರಸಭೆ, ನಗರಸಭೆ, ಪಟ್ಟಣದ ಪಂಚಾಯಿತಿ ವ್ಯಾಪ್ತಿಯ ಪ್ರಕರಣಗಳಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಬೇಕು ತಿದ್ದುಪಡಿ ಕಾಯ್ದೆಯಿಂದ ಲಂಚಕ್ಕೆ ಅವಕಾಶವಿಲ್ಲ. 79 ಎ.ಬಿ. ಎಂಬುದು ಒಂದು ದೊಡ್ಡ ದಂಧೆಯಾಗಿದೆ ಎಂದು ಹೇಳಿದರು.