ದೊಡ್ಡಬಳ್ಳಾಪುರ: ವಿಶೇಷ ಚೇತನ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೈರಾಪುರ ತಾಂಡ ಗೇಟ್ ಸಮೀಪ ಮಂಗಳವಾರ ನಡೆದಿದೆ.
ಮೃತನನ್ನು ಬೊಮ್ಮನಹಳ್ಳಿ ನಿವಾಸಿ ವೆಂಕಟಪ್ಪ(50) ಎಂದು ಗುರುತಿಸಲಾಗಿದೆ. ಈತ ವಿಶೇಷ ಚೇತನ ವ್ಯಕ್ತಿಯಲ್ಲದೆ, ನಿರ್ಗತಿಕ ಎನ್ನಲಾಗಿದೆ. ಈ ವ್ಯಕ್ತಿಯನ್ನು ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.