ಹೊಸಕೋಟೆ: ತಾಲ್ಲೂಕಿನ ಕಣ್ಣೂರಹಳ್ಳಿ, ಚೀಮಂಡಹಳ್ಳಿ ಹಾಗೂ ಪೆತ್ತನಹಳ್ಳಿ ಗ್ರಾಮಗಳಲ್ಲಿ ಗ್ರಾಮ ದೇವತೆಯ ಹಬ್ಬ ಹಮ್ಮಿಕೊಳ್ಳಲಾಗಿತ್ತು.
ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು, ಈ ಸಂದರ್ಭದಲ್ಲಿ ಕಣ್ಣೂರಹಳ್ಳಿಯ ಶ್ರೀಬಸವೇಶ್ವರ ಹಾಗೂ ಶ್ರೀಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಾಜಿ ಸಚಿವ ಎಂಟಿಬಿ ನಾಗರಾಜ್ ತಮಟೆ ವಾದ್ಯಕ್ಕೆ ಕುಣಿದರು.