ಅಯೋಧ್ಯನಗರ ಆರ್ಯವೈಶ್ಯ ನಗರ್ತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ರಮೇಶ್ ಕುಮಾರ್ ಮಾತನಾಡಿ, ಶತಮಾನಗಳಿಂದ ಈ ಉತ್ಸವ, ಧಾರ್ಮಿಕ ವಿಧಿವಿಧಾನ ನಡೆಸಲಾಗುತ್ತಿದೆ. ಇದರ ಅನ್ವಯ ಬೆಳಗಿನ ಜಾವ ಸೂರ್ಯ ಉದಯಕ್ಕಿಂತ ಮೊದಲು ವಿಘ್ನೇಶ್ವರನಿಗೆ ಪೂಜೆ, ಶಿವನಿಗೆ ರುದ್ರಾಭಿಷೇಕ, ವಿವಿಧ ಹೂವುಗಳ ಅಲಂಕಾರ ಫಲಪುಪ್ಪಗಳ ಸಮರ್ಪಣೆಯೊಂದಿಗೆ ಪೂಜೆ ನಡೆಸಲಾಗುತ್ತದೆ. ನಂತರ ಮೂಲ ವಿಗ್ರಹಕ್ಕೆ ವಿವಿಧ ಬಣ್ಣದ ವಸ್ತ್ರಲಂಕಾರ, ಪುಪ್ಪಾಲಂಕಾರದಿಂದ ಪೂಜೆ ಸಲ್ಲಿಸಲಾಗುವುದು. ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.