<p><strong>ಹೊಸಕೋಟೆ:</strong> ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ನಡೆದ ಕಲಿಕಾ ಪರವಾನಗಿ (ಎಲ್.ಎಲ್) ಹಾಗೂ ವಿಮಾ ಮೇಳದಲ್ಲಿ ಜನ ಸಾಗರವೇ ಸೇರಿತ್ತು.</p>.<p>ಬೆಳಿಗ್ಗೆ 9 ಗಂಟೆಗೆ ಪ್ರಾರಂಭವೆಂದು ತಿಳಿಸಿದ್ದ ಮೇಳವು ತಡವಾಗಿ ಪ್ರಾರಂಭವಾಯಿತು. ಆದರೂ ಜನರು ಸರತಿ ಸಾಲುಗಳಲ್ಲಿ ನಿಂತು ಕಾಯುತ್ತಿದ್ದರು.</p>.<p>ವಿವಿಧ ವಿಮಾ ಕಂಪನಿಯವರು ಸ್ಟಾಲ್ ಮೂಲಕ ಜನರಿಗೆ ವಿವರಣೆ ಹಾಗೂ ವಿಮೆ ಮಾಡಿಕೊಟ್ಟರು. ಜನರ ವಿವಿಧ ಸಂದೇಹಗಳಿಗೆ ವಿವರ ಕೊಡುವುದರಲ್ಲಿ ಪೊಲೀಸ್ ಸಿಬ್ಬಂದಿ ಸುಸ್ತಾದರು.</p>.<p>ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು. ವಯಸ್ಸಾದವರೂ ಸರತಿ ಸಾಲಿನಲ್ಲಿ ಬರುತ್ತಿದ್ದುದು ಕೆಂದ್ರ ಸರ್ಕಾರದ ದುಬಾರಿ ದಂಡದ ಪರಿಣಾಮವನ್ನು ತೋರಿಸುವಂತಿತ್ತು.</p>.<p>ಸಂಜೆ ಕಾರ್ಯಕ್ರಮವನ್ನು ಬಲವಂತವಾಗಿ ಮುಗಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಒಟ್ಟು 9 ಸಾವಿರ ಜನರು ಅರ್ಜಿಗಳನ್ನು ಕೊಟ್ಟಿದ್ದು ಅದರಲ್ಲಿ 600 ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೇಳದ ಪರಿಣಾಮ ಕ್ರೀಡಾಂಗಣದ ಮುಂದೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ನಡೆದ ಕಲಿಕಾ ಪರವಾನಗಿ (ಎಲ್.ಎಲ್) ಹಾಗೂ ವಿಮಾ ಮೇಳದಲ್ಲಿ ಜನ ಸಾಗರವೇ ಸೇರಿತ್ತು.</p>.<p>ಬೆಳಿಗ್ಗೆ 9 ಗಂಟೆಗೆ ಪ್ರಾರಂಭವೆಂದು ತಿಳಿಸಿದ್ದ ಮೇಳವು ತಡವಾಗಿ ಪ್ರಾರಂಭವಾಯಿತು. ಆದರೂ ಜನರು ಸರತಿ ಸಾಲುಗಳಲ್ಲಿ ನಿಂತು ಕಾಯುತ್ತಿದ್ದರು.</p>.<p>ವಿವಿಧ ವಿಮಾ ಕಂಪನಿಯವರು ಸ್ಟಾಲ್ ಮೂಲಕ ಜನರಿಗೆ ವಿವರಣೆ ಹಾಗೂ ವಿಮೆ ಮಾಡಿಕೊಟ್ಟರು. ಜನರ ವಿವಿಧ ಸಂದೇಹಗಳಿಗೆ ವಿವರ ಕೊಡುವುದರಲ್ಲಿ ಪೊಲೀಸ್ ಸಿಬ್ಬಂದಿ ಸುಸ್ತಾದರು.</p>.<p>ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು. ವಯಸ್ಸಾದವರೂ ಸರತಿ ಸಾಲಿನಲ್ಲಿ ಬರುತ್ತಿದ್ದುದು ಕೆಂದ್ರ ಸರ್ಕಾರದ ದುಬಾರಿ ದಂಡದ ಪರಿಣಾಮವನ್ನು ತೋರಿಸುವಂತಿತ್ತು.</p>.<p>ಸಂಜೆ ಕಾರ್ಯಕ್ರಮವನ್ನು ಬಲವಂತವಾಗಿ ಮುಗಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಒಟ್ಟು 9 ಸಾವಿರ ಜನರು ಅರ್ಜಿಗಳನ್ನು ಕೊಟ್ಟಿದ್ದು ಅದರಲ್ಲಿ 600 ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೇಳದ ಪರಿಣಾಮ ಕ್ರೀಡಾಂಗಣದ ಮುಂದೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>