‘ಮಳೆ, ಬೆಳೆಯ ಸತತ ಕೊರತೆಯಿಂದ ರಾಗಿ ಸೇರಿದಂತೆ ಜಾನುವಾರಗಳ ಮೇವಿಗೆ ಪರದಾಡುತ್ತಿದ್ದ ರೈತರು, ಈ ಬಾರಿ ಉತ್ತಮ ರಾಗಿ ಬೆಳೆಯಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಬೆಳೆಯೆಲ್ಲ ಹೊಲದಲ್ಲೇ ನೆಲಕ್ಕುರುಳಿದೆ. ಕಟಾವು ಮಾಡಲು ಒಬ್ಬ ಕಾರ್ಮಿಕರಿಗೆ ದಿನಕ್ಕೆ ₹ 500 ಕೂಲಿ ಕೊಡಬೇಕು. ಈಗ ಕಾರ್ಮಿಕರೂ ಸಿಗುತ್ತಿಲ್ಲ. ಕಟಾವು ಮಾಡುತ್ತಿರುವ ಯಂತ್ರಗಳಿಗೂ ಎಕರೆಗೆ ₹ 4 ಸಾವಿರ ಕೊಡಬೇಕು. ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಬೀಳುವ ಜಿಟಿಜಿಟಿ ಮಳೆಯಿಂದ ಬೆಳೆ ಕಟಾವು ಮಾಡಲು ಸಮಯ ಸಿಗುತ್ತಿಲ್ಲ. ಇದರಿಂದ ತೆನೆಯಲ್ಲಿನ ರಾಗಿ ಉದುರುವ ಹಂತಕ್ಕೆ ಹೋಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.