‘ನಗರಸಭೆ ವ್ಯಾಪ್ತಿಯ ಮಾರುತಿನಗರ, ಕುಂಬಾರ ಪೇಟೆ ಮುಖ್ಯರಸ್ತೆಯಲ್ಲಿ ಮಣ್ಣಿನ ಗಣೇಶಮೂರ್ತಿಗಳನ್ನು ಕುಂಬಾರ ಜನಾಂಗದವರು ಮಾರಾಟ ಮಾಡಲಿದ್ದಾರೆ. ಇಲ್ಲಿನ ಮಾರಾಟಗಾರರಿಂದ ನಗರಸಭೆ ವತಿಯಿಂದ ಯಾವುದೇ ರೀತಿಯ ಮಾರಾಟ ಸ್ಥಳ ಸುಂಕ ವಸೂಲಿ ಮಾಡದೆ ರಿಯಾಯಿತಿ ನೀಡುವಂತೆ ನಗರಸಭೆ ಪೌರಾಯುಕ್ತರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ’ ಎಂದರು.