ನವೆಂಬರ್ - ಡಿಸೆಂಬರ್ ಬಂತೆಂದರೆ ಆಹಾರ ಅರಸಿ ಕಾಡಾನೆಗಳು ಆಗಿಂದಾಗ್ಗೆ ಕಾಡಿನಿಂದ ಹೊರಬಂದು ರೈತರ ಬೆಳೆಗಳನ್ನು ತಿಂದು ಹಾಳು ಮಾಡುವುದು ಬನ್ನೇರುಘಟ್ಟ ಸುತ್ತಮುತ್ತ ಸಾಮಾನ್ಯ. ಆನೆಗಳ ಹಾವಳಿ ತಡೆಯಲು ರೈತರು ಹೊಲಗಳ ಬಳಿ ಮರಗಳ ಮೇಲೆ ಗುಡಿಸುಲು ಕಟ್ಟಿ ರಾತ್ರಿ ಕಾವಲು ಕಾಯುವುದು ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿ, ಚೂಡಹಳ್ಳಿ, ಶಿವನಹಳ್ಳಿ, ರಾಗಿಹಳ್ಳಿ, ಒಂಟೆಮಾರನದೊಡ್ಡಿ, ರಂಗಪ್ಪನದೊಡ್ಡಿ ಸೇರಿದಂತೆ ಹಲವು ಭಾಗಗಳಲ್ಲಿ ಕಂಡು ಬರುತ್ತದೆ.