ಅಂತರ್ಜಲ ಹೆಚ್ಚಳಕ್ಕೆ ಕ್ರಮ, ಗ್ರಾಮೀಣ ಜಲ ಭದ್ರತೆಯನ್ನು ಗಮನದಲ್ಲಿಸಿಕೊಂಡು ಭವಿಷ್ಯದಲ್ಲಿ ನೀರನ ಬವಣೆ ಪರಿಹರಿಸುವ ಸದುದ್ದೇಶದಿಂದ 2022ರ ಏಪ್ರಿಲ್ನಿಂದಲೇ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿತ್ತು. ದೇವನಹಳ್ಳಿ 12, ದೊಡ್ಡಬಳ್ಳಾಪುರ 30, ನೆಲಮಂಗಲ 16 ಹಾಗೂ ಹೊಸಕೋಟೆ ತಾಲ್ಲೂಕಿನ 19 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಾರಿ ಕೆರೆ ಅಂಗಳದಲ್ಲಿ ಮಾಜಿ ಸೈನಿಕರು, ಹಿರಿಯ ನಾಗರಿಕರಿಂದ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ತಿಳಿಸಿದರು.