ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಯಲ್ಲಾಪುರ ಗ್ರಾಮದ ರೈತ ಜಯರಾಮೇಗೌಡ ಅವರ ತೋಟದಲ್ಲಿ ಬೆಳೆಸಿದ್ದ 10 ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕಳ್ಳರು ಕತ್ತರಿಕೊಂಡೊಯ್ದಿದ್ದಾರೆ.
ಕಳೆದ 10 ವರ್ಷಗಳಿಂದ ಬೆಳೆಸಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಬಗ್ಗೆ ಕುದೂರು ಪೊಲೀಸರಿಗೆ ದೂರು ನೀಡಿರುವುದಾಗಿ ಬೆಳೆಗಾರರು ತಿಳಿಸಿದ್ದಾರೆ. ಶ್ರೀಗಂಧದ ಮರಗಳನ್ನು ಬೆಳೆಸುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಖಾಜಿಪಾಳ್ಯದ ಶ್ರೀಗಂಧದ ಮರಗಳನ್ನು ಬೆಳೆಸಿರುವ ಭೈರಪ್ಪ ಮನವಿ ಮಾಡಿದ್ದಾರೆ.