ಶಾಲೆಯ ಮುಖ್ಯಶಿಕ್ಷಕ ವಿ.ಬಸವರಾಜು ಮಾತನಾಡಿ, ವಿಭಿನ್ನ ಆವಿಷ್ಕಾರಗಳಿಂದ ವಿಶ್ವವೇ ನಮಗೆ ಇಂದು ಹತ್ತಿರವಾಗಿದೆ. ವಿಜ್ಞಾನ ಮಾನವನ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಇದರಿಂದಾಗಿಯೇ ಅಸಾಧ್ಯವಾದದ್ದು ಸಾಧ್ಯವಾಗಿದೆ. ವಿಜ್ಞಾನದಿಂದ ಸಮಾಜದ ಪ್ರಗತಿಗೆ ಹಾಗೂ ಮನುಷ್ಯನ ಶ್ರಮ, ಸಮಯದ ಉಳಿತಾಯಕ್ಕೂ ಕಾರಣವಾಗಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆ ಅನಾವರಣಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಅಗತ್ಯ. ಮೂಢನಂಬಿಕೆಗಳನ್ನು ತೊಲಗಿಸಿ ಎಲ್ಲರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಲು ವಿಜ್ಞಾನವು ಸಹಕಾರಿ ಆಗಿದೆ ಎಂದರು.