<p><strong>ದೊಡ್ಡಬಳ್ಳಾಪುರ</strong>: ತಾಲ್ಲೂಕಿನ ನಂದಿಬೆಟ್ಟದ ಸಾಲಿನ ಚನ್ನರಾಸ್ವಾಮಿ ಬೆಟ್ಟದಲ್ಲಿ ಜಾಲಾರಿ ಮರಗಳು ಹೂವುಗಳಿಂದ ಮೈದುಂಬಿ ನಿಂತಿದ್ದು ನೋಡಗರ ಕಣ್ಮನ ಸೆಳೆಯುತ್ತಿದೆ.</p>.<p>ರಾಜ್ಯದ ಕೆಲವೇ ಬೆಟ್ಟಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಬಗೆ ಜಾಲಾರಿ ಮರಗಳು ಚನ್ನರಾಯಸ್ವಾಮಿ ಬೆಟ್ಟದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಹೂವುಗಳಿಂದ ತುಂಬಿರುವ ಮರಗಳನ್ನು ನೋಡಲಷ್ಟೇ ಅಲ್ಲದೆ ಹೂವುಗಳಿಂದ ಬರುವ ಸುವಾಸನೆಯೂ ರಸಿಕರನ್ನು ಸಹ ಸೂಜಿಗಲ್ಲಿನಂತೆ ಸೆಳೆಯುತ್ತವೆ.</p>.<p>ಇಡೀ ತಾಲ್ಲೂಕಿನಲ್ಲಿಯೇ ಚನ್ನರಾಯಸ್ವಾಮಿ ಬೆಟ್ಟ ಮಳೆಗಾಲದಲ್ಲಿ ನೀರಿನ ಝರಿಗಳು, ಜಲಪಾತ ಹೊಂದಿರುವುದರಿಂದ ಜನರನ್ನು ತನ್ನತ್ತ ಸೆಳೆದರೆ, ಬೇಸಿಗೆಯಲ್ಲಿ ಇಲ್ಲಿನ ಜಾಲಾರಿ ಮರಗಳು ಸೇರಿದಂತೆ ವಿವಿಧ ಔಷಧಿ ಸಸ್ಯ ಸಂಪತ್ತು ಪರಿಸರ ಪ್ರಿಯರನ್ನು, ಚಾರಣಿಗರನ್ನು ಬೆಟ್ಟಕ್ಕೆ ಬರುವಂತೆ ಮಾಡುತ್ತದೆ.</p>.<p>ಚನ್ನರಾಯಸ್ವಾಮಿ ಬೆಟ್ಟದಲ್ಲಿ ಅಪರೂಪದ ಜಾಲಾರಿ ಮರಗಳು ಹಾಗೂ ಔಷಧಿ ಸಸ್ಯ ಸಂಪತ್ತು ಇರುವುದರಿಂದ ಬೇಸಿಗೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ ಬೆಟ್ಟಕ್ಕೆ ಬೆಂಕಿ ಬೀಳದಂತೆ ನಿಗಾವಹಿಸಬೇಕು ಎನ್ನುವುದು ಬಹುದಿನಗಳ ಆಗ್ರಹ.</p>.<p>ಆದರೆ, ಬೆಟ್ಟಕ್ಕೆ ಬೆಂಕಿ ಬೀಳುವುದು ಮಾತ್ರ ತಪ್ಪಿಲ್ಲ. ಚನ್ನರಾಯಸ್ವಾಮಿ ಬೆಟ್ಟ ಇಕೋ ಟೂರಿಸಂ ವ್ಯಾಪ್ತಿಗೆ ಒಳಪಟ್ಟಿದೆ. ಚಾರಣಿಗರು ಬೆಟ್ಟ ಹತ್ತಲು<br />ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡೇ ಬರಬೇಕಿದೆ. ಇಷ್ಟಾದರೂ ಸಹ ಬೆಟ್ಟವನ್ನು ಮತ್ತಷ್ಟು ಹಸಿರೀಕರಣಗೊಳಿಸಲು ಹಾಗೂ ಈಗ ಇರುವ ಸಸ್ಯ ಸಂಪತ್ತು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹೆಚ್ಚಿನ ಕಾಣಜಿವಹಿಸಬೇಕಿದೆ ಎನ್ನುತ್ತಾರೆ ಇಕೋಟೂರಿಸಂ ಮಾರ್ಗದರ್ಶಕ ಚಿದಾನಂದ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ</strong>: ತಾಲ್ಲೂಕಿನ ನಂದಿಬೆಟ್ಟದ ಸಾಲಿನ ಚನ್ನರಾಸ್ವಾಮಿ ಬೆಟ್ಟದಲ್ಲಿ ಜಾಲಾರಿ ಮರಗಳು ಹೂವುಗಳಿಂದ ಮೈದುಂಬಿ ನಿಂತಿದ್ದು ನೋಡಗರ ಕಣ್ಮನ ಸೆಳೆಯುತ್ತಿದೆ.</p>.<p>ರಾಜ್ಯದ ಕೆಲವೇ ಬೆಟ್ಟಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಬಗೆ ಜಾಲಾರಿ ಮರಗಳು ಚನ್ನರಾಯಸ್ವಾಮಿ ಬೆಟ್ಟದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಹೂವುಗಳಿಂದ ತುಂಬಿರುವ ಮರಗಳನ್ನು ನೋಡಲಷ್ಟೇ ಅಲ್ಲದೆ ಹೂವುಗಳಿಂದ ಬರುವ ಸುವಾಸನೆಯೂ ರಸಿಕರನ್ನು ಸಹ ಸೂಜಿಗಲ್ಲಿನಂತೆ ಸೆಳೆಯುತ್ತವೆ.</p>.<p>ಇಡೀ ತಾಲ್ಲೂಕಿನಲ್ಲಿಯೇ ಚನ್ನರಾಯಸ್ವಾಮಿ ಬೆಟ್ಟ ಮಳೆಗಾಲದಲ್ಲಿ ನೀರಿನ ಝರಿಗಳು, ಜಲಪಾತ ಹೊಂದಿರುವುದರಿಂದ ಜನರನ್ನು ತನ್ನತ್ತ ಸೆಳೆದರೆ, ಬೇಸಿಗೆಯಲ್ಲಿ ಇಲ್ಲಿನ ಜಾಲಾರಿ ಮರಗಳು ಸೇರಿದಂತೆ ವಿವಿಧ ಔಷಧಿ ಸಸ್ಯ ಸಂಪತ್ತು ಪರಿಸರ ಪ್ರಿಯರನ್ನು, ಚಾರಣಿಗರನ್ನು ಬೆಟ್ಟಕ್ಕೆ ಬರುವಂತೆ ಮಾಡುತ್ತದೆ.</p>.<p>ಚನ್ನರಾಯಸ್ವಾಮಿ ಬೆಟ್ಟದಲ್ಲಿ ಅಪರೂಪದ ಜಾಲಾರಿ ಮರಗಳು ಹಾಗೂ ಔಷಧಿ ಸಸ್ಯ ಸಂಪತ್ತು ಇರುವುದರಿಂದ ಬೇಸಿಗೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ ಬೆಟ್ಟಕ್ಕೆ ಬೆಂಕಿ ಬೀಳದಂತೆ ನಿಗಾವಹಿಸಬೇಕು ಎನ್ನುವುದು ಬಹುದಿನಗಳ ಆಗ್ರಹ.</p>.<p>ಆದರೆ, ಬೆಟ್ಟಕ್ಕೆ ಬೆಂಕಿ ಬೀಳುವುದು ಮಾತ್ರ ತಪ್ಪಿಲ್ಲ. ಚನ್ನರಾಯಸ್ವಾಮಿ ಬೆಟ್ಟ ಇಕೋ ಟೂರಿಸಂ ವ್ಯಾಪ್ತಿಗೆ ಒಳಪಟ್ಟಿದೆ. ಚಾರಣಿಗರು ಬೆಟ್ಟ ಹತ್ತಲು<br />ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡೇ ಬರಬೇಕಿದೆ. ಇಷ್ಟಾದರೂ ಸಹ ಬೆಟ್ಟವನ್ನು ಮತ್ತಷ್ಟು ಹಸಿರೀಕರಣಗೊಳಿಸಲು ಹಾಗೂ ಈಗ ಇರುವ ಸಸ್ಯ ಸಂಪತ್ತು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹೆಚ್ಚಿನ ಕಾಣಜಿವಹಿಸಬೇಕಿದೆ ಎನ್ನುತ್ತಾರೆ ಇಕೋಟೂರಿಸಂ ಮಾರ್ಗದರ್ಶಕ ಚಿದಾನಂದ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>