<p><strong>ದೊಡ್ಡಬಳ್ಳಾಪುರ: </strong>ನಗರದ ಸೋಮೇಶ್ವರಸ್ವಾಮಿ ದೇವಾಲಯ ಸಮೀಪದ ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪಾದಪೂಜಾ ಕಾರ್ಯಕ್ರಮ ನಡೆಯಿತು.</p>.<p>ಕೊಡಗು ಜಿಲ್ಲೆ ಶನಿವಾರಸಂತೆಯ ಮುಳ್ಳುರಿನ ಸ್ವತಂತ್ರಬಸವಲಿಂಗ ಸ್ವಾಮೀಜಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.</p>.<p>ಶಿವಕುಮಾರಸ್ವಾಮೀಜಿ ಅನ್ನ, ಅಕ್ಷರ ಮತ್ತು ಆಶ್ರಯ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದರು. ತಮ್ಮ ದಿನಚರಿಯಲ್ಲಿ ಇಷ್ಟಲಿಂಗ ಪೂಜೆ, ಧಾರ್ಮಿಕ ಆಚರಣೆಗಳನ್ನು ತಪ್ಪದೇ ನೆರವೇರಿಸುತ್ತಿದ್ದರು. ಇಂತಹ ಮಹಾಮಹಿಮರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.</p>.<p>ಮಹಾದೇವಣ್ಣ ಮತ್ತು ಸಂಗಡಿಗರಿಂದ ದಾಸೋಹ ಸೇವೆ ನಡೆಯಿತು.</p>.<p>ಬಸವೇಶ್ವರ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ, ಮಠ ಭಕ್ತರಾದ ಕೊನಘಟ್ಟ ಬಸವರಾಜು, ರೇಣುಕಾಬಸವರಾಜು, ಪ್ರೇಮಕುಮಾರಿ, ಶ್ವೇತ, ಗಿರೀಶ, ಗಗನ್ ಕಿಚಿಡಿ, ಪ್ರಭಾಕರ್ ಸೋಣಪ್ಪನಹಳ್ಳಿ, ಪದ್ಮವೆಂಕಟೇಶ, ರಾಜಶೇಖರ್, ಪ್ರಭುದೇವ, ಮುತ್ತಣ್ಣ, ಬಸವಲಿಂಗಯ್ಯ, ನಟರಾಜ, ರೇಣುಕಾಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ನಗರದ ಸೋಮೇಶ್ವರಸ್ವಾಮಿ ದೇವಾಲಯ ಸಮೀಪದ ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪಾದಪೂಜಾ ಕಾರ್ಯಕ್ರಮ ನಡೆಯಿತು.</p>.<p>ಕೊಡಗು ಜಿಲ್ಲೆ ಶನಿವಾರಸಂತೆಯ ಮುಳ್ಳುರಿನ ಸ್ವತಂತ್ರಬಸವಲಿಂಗ ಸ್ವಾಮೀಜಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.</p>.<p>ಶಿವಕುಮಾರಸ್ವಾಮೀಜಿ ಅನ್ನ, ಅಕ್ಷರ ಮತ್ತು ಆಶ್ರಯ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದರು. ತಮ್ಮ ದಿನಚರಿಯಲ್ಲಿ ಇಷ್ಟಲಿಂಗ ಪೂಜೆ, ಧಾರ್ಮಿಕ ಆಚರಣೆಗಳನ್ನು ತಪ್ಪದೇ ನೆರವೇರಿಸುತ್ತಿದ್ದರು. ಇಂತಹ ಮಹಾಮಹಿಮರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.</p>.<p>ಮಹಾದೇವಣ್ಣ ಮತ್ತು ಸಂಗಡಿಗರಿಂದ ದಾಸೋಹ ಸೇವೆ ನಡೆಯಿತು.</p>.<p>ಬಸವೇಶ್ವರ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ, ಮಠ ಭಕ್ತರಾದ ಕೊನಘಟ್ಟ ಬಸವರಾಜು, ರೇಣುಕಾಬಸವರಾಜು, ಪ್ರೇಮಕುಮಾರಿ, ಶ್ವೇತ, ಗಿರೀಶ, ಗಗನ್ ಕಿಚಿಡಿ, ಪ್ರಭಾಕರ್ ಸೋಣಪ್ಪನಹಳ್ಳಿ, ಪದ್ಮವೆಂಕಟೇಶ, ರಾಜಶೇಖರ್, ಪ್ರಭುದೇವ, ಮುತ್ತಣ್ಣ, ಬಸವಲಿಂಗಯ್ಯ, ನಟರಾಜ, ರೇಣುಕಾಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>