ದೊಡ್ಡಬಳ್ಳಾಪುರ: ರಾಜಕಾಲುವೆ ಸೇರುತ್ತಿರುವ ಕಲ್ಲು ಬಂಡೆಗಳು: ದೂರು

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡ ತುಮಕೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಲೇಔಟ್ಗಳಲ್ಲಿನ ಕಲ್ಲು ಬಂಡೆಗಳನ್ನು ಮಳೆ ನೀರು ಹರಿದು ಹೋಗುವ ರಾಜಕಾಲುವೆಗಳಿಗೆ ತಂದು ತುಂಬುತ್ತಿದ್ದಾರೆ. ಇದರಿಂದ ಮಳೆ ನೀರು ಕೆರೆಗಳಿಗೆ ಹರಿದು ಬರಲು ಅಡ್ಡಿಯಾಗಿದೆ ಎಂದು ದೊಡ್ಡತುಮಕೂರು ಗ್ರಾಮದ ನಿವಾಸಿ ಟಿ.ಕೆ. ವಸಂತ್ಕುಮಾರ್ ದೂರಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಲೇಔಟ್ಗಳ ನಿರ್ಮಾಣದ ಸಂದರ್ಭದಲ್ಲಿ ನಿವೇಶನಗಳ ವಿಗಂಡೆಯಲ್ಲಿ ಅಡ್ಡಿಯಾಗುವ ಬಂಡೆಗಳನ್ನು ಎಲ್ಲೆಂದರಲ್ಲಿ ತಂದು ರಾಶಿ ಹಾಕಿ ಮಳೆ ನೀರು ಹರಿದು ಹೋಗುವ ರಾಜಕಾಲುವೆ, ಹಳ್ಳಗಳಲ್ಲಿ ರಾಶಿ ಹಾಕುವುದರಿಂದ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿ ನೀರು ರಸ್ತೆ, ರೈತರ ಹೊಲಗಳಿಗೆ ನುಗ್ಗುವಂತಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಸೂಕ್ತ ಕ್ರಮವಹಿಸಿಲ್ಲ ಎಂದು ಅವರು ದೂರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.