ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿದೆ. ಆದರೆ, ಅಡ್ಡದಾರಿಯಲ್ಲಿ ತರಬೇತಿ ಪಡೆದ ಪದವೀಧರರಿಂದ ನಡೆಯುವ ಶಸ್ತ್ರಚಿಕಿತ್ಸೆಯು ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲಿದೆ. ವೈದ್ಯಕೀಯ ಅಧ್ಯಯನ ವಿಭಾಗಗಳನ್ನು ಮಿಶ್ರಣಗೊಳಿಸುವ ಈ ನಿರ್ಧಾರ ಸರಿಯಲ್ಲ ಎಂದುಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ಜಿ. ವಿಜಯಕುಮಾರ್ ದೂರಿದರು.