ದೊಡ್ಡಬಳ್ಳಾಪುರ:ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ. ಮಹಾಲಿಂಗಯ್ಯ ತಿಳಿಸಿದ್ದಾರೆ.
ಮಹಾಸಭಾಕ್ಕೆ ಐದು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯಲಿದೆ. ಮಹಾಸಭಾ ನಿರ್ದೇಶಕರಾಗಿ ಎಸ್. ಗಾಯತ್ರಿ, ಬಿ. ಗಾಯತ್ರಿ, ದಾಕ್ಷಾಯಿಣಿ ವಿಶ್ವನಾಥ್, ಮಮತಾ ಮಂಜುನಾಥ್, ಎಸ್. ಮಂಜುಳಾ, ಪಿ.ವಿ. ಸಿದ್ಧಲಿಂಗಮ್ಮ, ಕೆ.ಎಂ. ಶೋಭಾ(ಮಹಿಳಾ ವಿಭಾಗ) ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸದಸ್ಯ ವರ್ಗದಲ್ಲಿ ಸಿ.ಎಸ್. ಶಿವಶಂಕರಪ್ಪ, ಪಿ. ಪ್ರಭಾಕರ್, ಆರ್. ಸದಾಶಿವ, ರೇವಣ್ಣ, ವಿ. ಜಿಂಕೆಬಚ್ಚಹಳ್ಳಿ, ಕೆ.ಎಸ್. ಮಹದೇವಯ್ಯ, ನಂದೀಶ್, ಬಸವರಾಜಯ್ಯ, ವೀರಭದ್ರ, ಎನ್. ಉಜ್ಜಿನಿ, ಎಸ್. ಸುರೇಶ್, ಡಿ.ಸಿ. ಮಹೇಶ್, ಸಿದ್ದರಾಮಣ್ಣ, ಪಿ.ಸಿ. ಮಂಜುನಾಥ್, ಬಿ. ಚರಣ್ ಆಯ್ಕೆಯಾಗಿದ್ದಾರೆ.