ವಿಜಯಪುರದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಹೊರಟಿದ್ದ ಲಾರಿಯು ತಿರುವಿನಲ್ಲಿ ಎಡಭಾಗಕ್ಕೆ ಬಂದಿರುವ ಕಾರಣ ಕೆರೆಗೆ ಉರುಳಿ ಬಿದ್ದಿದೆ. ತಡೆಗೋಡೆ ಇದ್ದಿದ್ದರೆ ಲಾರಿ ಉರುಳಿ ಬೀಳುತ್ತಿರಲಿಲ್ಲ. ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆ ಇದಾಗಿದೆ. ಬಹುತೇಕ ಸರಕು ಸಾಗಾಣಿಕೆ ವಾಹನಗಳು ಇದೇ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಈ ರಸ್ತೆ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂಬುದು ಜನರ ದೂರು.